Thursday, 19th September 2024

‘ನಾರಿಶಕ್ತಿ’ ಪ್ರಶಸ್ತಿ ಪುರಸ್ಕೃತೆ, ಕೊಲ್ಲಂನ ಶತಾಯುಷಿ ಭಾಗೀರಥಿ ಅಮ್ಮ ಇನ್ನಿಲ್ಲ

ಕೊಲ್ಲಂ: ಸಾಕ್ಷರತಾ ಪರೀಕ್ಷೆ (105ನೇ ವಯಸ್ಸಿನಲ್ಲಿ) ಬರೆದು ಉತ್ತೀರ್ಣರಾಗಿ, ಪ್ರಧಾನಿ ನರೇಂದ್ರ ಮೋದಿಯವ ರಿಂದ ಪ್ರಶಂಸೆ ಗಳಿಸಿದ್ದ, ‘ನಾರಿಶಕ್ತಿ’ ಪ್ರಶಸ್ತಿ ಪುರಸ್ಕೃತೆ, ಕೇರಳದ ‘ಹಿರಿಯ ವಿದ್ಯಾರ್ಥಿ’ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ.

ಕೊಲ್ಲಂ ಜಿಲ್ಲೆಯ ಪ್ರಕುಲಂನ ಶತಾಯುಷಿ ಭಾಗೀರಥಿ ಅಮ್ಮ, 2019 ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ (ಕೆಎಸ್‌ಎಲ್‌ಎಂ) ನಡೆಸಿದ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 275 ಅಂಕಗಳಿಗೆ 205 ಅಂಕಗಳನ್ನು ಪಡೆದಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆ ದಿದ್ದರು. ವಯಸ್ಸಿನ ಕಾರಣದಿಂದಾಗಿ ಭಾಗೀರಥಿಯವರು ಪರಿಸರ, ಗಣಿತ ಮತ್ತು ಮಲಯಾಳಂ ವಿಷಯಗಳ ಪತ್ರಿಕೆಗಳಿಗೆ ಉತ್ತರಿಸಲು ಮೂರು ದಿನ ಸಮಯ ತೆಗೆದುಕೊಂಡರಂತೆ.

ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಭಾಗೀರಥಿಯವರು ಮೂರನೇ ವಯಸ್ಸಿಗೆ ಓದನ್ನು ಮೊಟಕು ಗೊಳಿಸಿದ್ದರು. ಓದು, ಅಧ್ಯಯನಕ್ಕಾಗಿ ಹಂಬಲಿಸುತ್ತಿದ್ದ ಅವರಿಗೆ ಕೊನೆಗೂ ಶಿಕ್ಷಣ ಮುಂದುವರಿಸಲು ಅವಕಾಶವೇ ಸಿಗಲಿಲ್ಲ. ಅಮ್ಮನಿಗೆ ಅಧ್ಯಯನದ ಬಗೆಗಿರುವ ಉತ್ಸಾಹ ಕಂಡ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಪ್ರಶಂಸಿಸಿದ್ದರು.

ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಭಾಗೀರಥಿ ಅಮ್ಮನವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ನಾರಿಶಕ್ತಿ’ ಪುರಸ್ಕಾರ ನೀಡಿ ಗೌರವಿ ಸಿದೆ.

Leave a Reply

Your email address will not be published. Required fields are marked *