Sunday, 8th September 2024

ಸಂಸದ ಸಂತೋಷ್ ಸಿಂಗ್ ನಿಧನ: ಒಂದು ದಿನ ಯಾತ್ರೆ ಸ್ಥಗಿತ

ವದೆಹಲಿ: ಭಾರತ್‌ ಜೋಡೊ ಯಾತ್ರೆ ಮೆರವಣಿಗೆಯ ವೇಳೆ ಹೃದಯಾ ಘಾತದಿಂದ ನಿಧನರಾದ ಪಕ್ಷದ ಸಂಸದ ಸಂತೋಷ್ ಸಿಂಗ್ ಚೌಧರಿ ಅವರಿಗೆ ಗೌರವ ಸೂಚಕವಾಗಿ ಪಂಜಾಬ್‌ನಲ್ಲಿ ನಡೆಯುತ್ತಿದ್ದ ಯಾತ್ರೆಯನ್ನು ಕಾಂಗ್ರೆಸ್ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿದೆ.

ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಜನವರಿ 15 ರಂದು ಜಲಂಧರ್‌ನಲ್ಲಿ ತಮ್ಮ ನಿಗದಿತ ಪತ್ರಿಕಾಗೋಷ್ಠಿ ಯನ್ನು ಮುಂದೂಡಿದರು. ಈಗ ಅದು ಜನವರಿ 17 ರಂದು ಹೋಶಿಯಾರ್‌ಪುರದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಷ್ ಸಿಂಗ್ ಚೌಧರಿ ಅವರಿಗೆ ಗೌರವ ಸೂಚಕವಾಗಿ ಭಾರತ್ ಜೋಡೋ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುವುದು.

ನಾಳೆ ಮಧ್ಯಾಹ್ನ ಜಲಂಧರ್‌ನ ಖಾಲ್ಸಾ ಕಾಲೇಜು ಮೈದಾನದಿಂದ ಯಾತ್ರೆ ಪುನರಾರಂಭವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

error: Content is protected !!