Wednesday, 23rd October 2024

ಬಂಗಾಳದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯ ಜಂಟಿ ಶೋಧ ’ಸದ್ದು’: ಉದ್ಯಮಿಗಳಿಗೆ ಬಿಸಿ

ಕೋಲ್ಕತ್ತ: ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿ, ಪಶ್ಚಿಮ ಬಂಗಾಳದ ಹಲವೆಡೆ ಸಿಬಿಐ ಮತ್ತು ಜಾರಿ ನಿರ್ದೇಶನಾಲ ಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ಜಂಟಿ ಶೋಧ ಕಾರ್ಯಾಚರಣೆ ನಡೆಸಿದರು.

ಒಂದೆಡೆ ಕೋಲ್ಕತ್ತದಲ್ಲಿ ಉದ್ಯಮಿ ರಣ್‌ಧೀರ್ ಕುಮಾರ್ ಬಾರ್ನ್ವಾಲ್ ಅವರ ಕಚೇರಿ ಮತ್ತು ನಿವಾಸದ ಮೇಲೆ  ಸಿಬಿಐ ದಾಳಿ, ಇನ್ನೊಂದೆಡೆ ಕೋಲ್ಕತ್ತ, ದುರ್ಗಾಪುರ ಮತ್ತು ಅಸನ್‌ಸೋಲ್‌ನಲ್ಲಿ ಇ.ಡಿ ಶೋಧ ಕಾರ್ಯಾಚರಣೆ ನಡೆಸಿದೆ.

ಎರಡು ತನಿಖಾ ಸಂಸ್ಥೆಗಳು ಹಗರಣದ ಬಗ್ಗೆ ತನಿಖೆ ನಡೆಸುತ್ತಿದೆ. ಸಿಬಿಐ ಕ್ರಿಮಿನಲ್‌ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದರೆ, ಇಡಿಯು ಹಣ ಅಕ್ರಮ ವರ್ಗಾವಣೆ ಆಯಾಮದಲ್ಲಿ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಪ್ರಕರಣ ಸಂಬಂಧ ತೃಣಮೂಲ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.