Monday, 16th September 2024

ನೆಹರೂ ಸ್ಮಾರಕಕ್ಕೆ ಕಾಂಗ್ರೆಸ್‌ ಮುಖಂಡರ ಶ್ರದ್ಧಾಂಜಲಿ

ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಪುಣ್ಯತಿಥಿಯಂದು ಗುರುವಾರ ಕಾಂಗ್ರೆಸ್‌ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿ ದರು.

ಶಾಂತಿವನದಲ್ಲಿರುವ ನೆಹರೂ ಸ್ಮಾರಕಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪುಷ್ಪನಮನ ಸಲ್ಲಿಸಿದರು.

ನಾವು ಪಂಡಿತ್‌ ಜವಾಹರಲಾಲ್‌ ನೆಹರೂ ಅವರಿಗೆ ಗೌರವ ಸಲ್ಲಿಸಿದೆವು. ಅವರು ಭಾರತ ಸೇರಿದಂತೆ ಇಡೀ ಪ್ರಪಂಚಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಅತ್ಯುನ್ನತ ಬುದ್ಧಿಶಕ್ತಿ ಹೊಂದಿದ್ದ ನಿಜವಾದ ದೇಶಭಕ್ತರಾಗಿದ್ದರು. ಅವರು ಆಧುನಿಕ ಭಾರತದ ಶಿಲ್ಪಿ’ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಹೇಳಿದೆ.

ನೆಹರೂ ಹೇಳಿಕೆಯನ್ನು ಪೋಸ್ಟ್‌ ಮಾಡಿರುವ ರಾಹುಲ್‌, ‘ಅವರ ಪುಣ್ಯಸ್ಮರಣೆಯ ದಿನ ಅವರ ತಿಳಿವಳಿಕೆಯ ಮಾತುಗಳು ನೆನಪಾಗುತ್ತಿವೆ’ ಎಂದಿದ್ದಾರೆ. ನೆಹರೂ ಆಗಸ್ಟ್‌ 1947ರಿಂದ ಮೇ 1964 ರವರೆಗೆ ಅಧಿಕಾರ ನಿರ್ವಹಿಸಿದ್ದರು. 1964ರಲ್ಲಿ ನಿಧನ ಹೊಂದಿದರು.

Leave a Reply

Your email address will not be published. Required fields are marked *