Monday, 16th September 2024

ಸಕ್ರಿಯ ರಾಜಕಾರಣಕ್ಕೆ ಡಿಎಂಕೆಯ ಸುಬ್ಬುಲಕ್ಷ್ಮಿ ಜಗದೀಸನ್ ನಿವೃತ್ತಿ

ಚೆನ್ನೈ: ಮಾಜಿ ಕೇಂದ್ರ ಸಚಿವೆ ಹಾಗೂ ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಸುಬ್ಬುಲಕ್ಷ್ಮಿ ಜಗದೀಸನ್ ಅವರು ಮಂಗಳವಾರ ತಮಿಳುನಾಡು ಮುಖ್ಯ ಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ತಾನು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ.

14 ನೇ ಲೋಕಸಭೆಯ ಸದಸ್ಯೆಯಾಗಿದ್ದ ಜಗದೀಸನ್ ದ್ರಾವಿಡ ಮುನ್ನೇತ್ರ ಕಳಗಂ ಸದಸ್ಯರಾಗಿ ತಮಿಳುನಾಡಿನ ತಿರುಚೆಂಗೋಡ್ ಕ್ಷೇತ್ರವನ್ನು ಪ್ರತಿ ನಿಧಿಸಿದ್ದರು. ಕೇಂದ್ರ ಸರಕಾರದಲ್ಲಿ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿದ್ದರು.

ಜಗದೀಸನ್ ಅವರು 1977-1980 ರ ಅವಧಿಯಲ್ಲಿ ತಮಿಳುನಾಡಿನ ಜವಳಿ, ಖಾದಿ, ಕೈಮಗ್ಗ, ಸಣ್ಣ-ಪ್ರಮಾಣದ ಕೈಗಾರಿಕೆಗಳು, ಅಬಕಾರಿ ಸಚಿವಾಲಯದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. 1989 ರಿಂದ 1991 ರವರೆಗೆ ಅವರು ತಮಿಳುನಾಡಿನ ಸಮಾಜ ಕಲ್ಯಾಣ ಸಚಿವಾಲಯದಲ್ಲಿ ಸಚಿವರಾಗಿದ್ದರು.