Thursday, 19th September 2024

ಕೊರೊನಾಗೆ ರೈತ ಮುಖಂಡ ಬಲಿ

ಸೊಲ್ಲಾಪುರ: ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಮಾರುತಿ ಮಾನ್ಪಡೆ (65)ಅವರು ಕೊರೊನಾ ಸೋಂಕಿಗೆ ಬಲಿಯಾಗಿ ದ್ದಾರೆ.

ಸೊಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾನ್ಪಡೆಯವರು, ಭೂ ಮಸೂದೆ, ಎಪಿಎಂಸಿ ಬಿಲ್ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಹಾಗೂ ಇತ್ತೀಚೆಗೆ ಸೆ.28ರ ಕರ್ನಾಟಕ ಬಂದ್‍‍ಗೆ ಕರೆ ನೀಡಿದ್ದರು.

ಸುಮಾರು‌ ನಾಲ್ಕು ದಶಕಗಳಿಂದ ರೈತ, ಹೋರಾಟದಲ್ಲಿ ತೊಡಗಿದ್ದ ಮಾರುತಿ ಮಾನ್ಪಡೆ ಅವರು ಇದೇ ಅ.4ರಂದು ಅನಾರೋಗ್ಯದಿಂದ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. 5ರಂದು ಕೋವಿಡ್ ಸೋಂಕು ದೃಢಪಟ್ಟ ನಂತರ ಸೋಲಾ ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಪಕ್ಷದಲ್ಲೂ ಸಕ್ರಿಯರಾಗಿದ್ದ ಮಾನ್ಪಡೆ ಅವರು ರಾಜ್ಯ ಸಮಿತಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹುಟ್ಟು ಹೊರಾಟ ಗಾರರಾಗಿದ್ದ ಅವರು ಅಗಲಿಕೆಯಿಂದ ತುಂಬಲಾಗದ ನಷ್ಟ ಆಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಹೇಳಿದ್ದಾರೆ.