Thursday, 19th September 2024

ಬಾಲಕಿಯ ಕೊಳೆತ ದೇಹ ಗೋಣಿ ಚೀಲದಲ್ಲಿ ಪತ್ತೆ

ನವದೆಹಲಿ : ಸಾಮೂಹಿಕ ಅತ್ಯಾಚಾರವೆಸಗಿ ಕತ್ತು ಹಿಸುಕಿ ಸಾಯಿಸಲಾದ 14 ವರ್ಷದ ಬಾಲಕಿಯ ಕೊಳೆತ ದೇಹವು ಹೊರ ದೆಹಲಿಯ ನರೇಲಾ ಪ್ರದೇಶದ ಅಂಗಡಿಯೊಂದರಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಸೋಮವಾರ  ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿ ಯಾಗಿದ್ದಾನೆ. ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ದೆಹಲಿಯಿಂದ ಮುಂಬಯಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದಾಗ ಸನ್ನೋತ್ ಗ್ರಾಮದಿಂದ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆ.12 ರಂದು ಹದಿಹರೆಯದ ಬಾಲಕಿಯನ್ನು ಅಪಹರಿಸಲಾಗಿತ್ತು ಮತ್ತು ಮೂರು ದಿನಗಳ ನಂತರ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಆಕೆಯ ಪೋಷಕರ ಹೇಳಿಕೆಯ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಕಾಣೆಯಾದ ಒಂದು ವಾರದ ನಂತರ ಶನಿವಾರ, ಸನ್ನೋತ್ ಗ್ರಾಮದ ತನ್ನ ಅಂಗಡಿ ಯಲ್ಲಿ ದುರ್ವಾಸನೆ ಬೀರುತ್ತಿರುವ ಬಗ್ಗೆ ಅಂಗಡಿ ಯವನಿಂದ ಪೊಲೀಸರಿಗೆ ಕರೆ ಬಂದಾಗ ಭಯಾನಕತೆ ಬಯಲಾಯಿತು. ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಒಬ್ಬ ಕಾರ್ಮಿಕನು ಕೆಲಸಕ್ಕೆ ಬಂದಿರಲಿಲ್ಲ ಎಂದು ಅಂಗಡಿಯವನು ಹೇಳಿದ್ದಾನೆ.

ಪೊಲೀಸರು ಅಂಗಡಿ ಪರಿಶೀಲಿಸಿದಾಗ, ಕಾಣೆಯಾದ ಹದಿಹರೆಯದ ಬಾಲಕಿಯ ಶವವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.

“ಅವರು ಹುಡುಗಿಯನ್ನು ಮೋಸದಿಂದ ಕರೆದು ಒಬ್ಬೊಬ್ಬರಾಗಿ ಅತ್ಯಾಚಾರ ಮಾಡಿದರು ಮತ್ತು ನಂತರ ಅವಳು ಧರಿಸಿದ್ದ ಪಲಾಝೋ ಪ್ಯಾಂಟ್ ಅನ್ನು ಬಳಸಿ ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಯಾದವ್ ಹೇಳಿದರು.