Sunday, 8th September 2024

ಹಿಂಡನ್‌ಬರ್ಗ್-ಅದಾನಿ ವಿವಾದ: ಕೈ ಪ್ರತಿಭಟನೆ ಇಂದು

ವದೆಹಲಿ: ಹಿಂಡನ್‌ಬರ್ಗ್-ಅದಾನಿ ವಿವಾದದ ನಡುವೆ ಕಾಂಗ್ರೆಸ್ ಸೋಮವಾರ ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸಲಿದೆ.

ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಗಳ ಮುಂದೆ ದೇಶಾ ದ್ಯಂತ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ.

ದೆಹಲಿಯಲ್ಲಿ, ಎಸ್‌ಬಿಐ ಕಚೇರಿ ಮತ್ತು ಪಾರ್ಲಿಮೆಂಟ್ ಪೊಲೀಸ್ ಠಾಣೆಯಲ್ಲಿರುವ ಎಲ್‌ಐಸಿ ಕಚೇರಿಯ ಹೊರಗೆ ಎನ್‌ಎಸ್‌ ಯುಐ-ಯೂತ್ ಕಾಂಗ್ರೆಸ್ ಮೂಲಕ ಪ್ರದರ್ಶನ ನಡೆಯಲಿದೆ.

ದೇಶಾದ್ಯಂತ ಕಾಂಗ್ರೆಸ್ ನಾಯಕರು ಎಸ್‌ಬಿಐ ಕಚೇರಿ ಮತ್ತು ಎಲ್‌ಐಸಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲಿದ್ದು, ರಾಜ್ಯಗಳ ದೊಡ್ಡ ನಾಯಕರು ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಸಂಸದರು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸ ಲಿದ್ದಾರೆ.

ಅದಾನಿ ವಿಚಾರದಲ್ಲಿ ಕಾಂಗ್ರೆಸ್‌ಗೆ ಇತರ ವಿರೋಧ ಪಕ್ಷಗಳ ಬೆಂಬಲ ಸಿಗುತ್ತಿದೆಯಾದರೂ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಜನತಾ ದಳ (ಜಾತ್ಯತೀತ) ಈ ವಿಷಯದಲ್ಲಿ ಕಾಂಗ್ರೆಸ್‌ ನಿಂದ ಅಂತರ ಕಾಯ್ದು ಕೊಂಡಿವೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಎಸ್‌ಬಿಐ ಮತ್ತು ಎಲ್‌ಐಸಿಯಲ್ಲಿ ಅದಾನಿ ಸಮೂಹದ ಹೂಡಿಕೆ ಮಧ್ಯಮ ವರ್ಗದ ಉಳಿತಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಪ್ರತಿಪಕ್ಷಗಳು ವಾದಿಸುತ್ತಿವೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿ ಸಲು ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ವಿರೋಧ ಪಕ್ಷದ ಸಂಸದರು ಹೇಳಿದರು.

ಸಂಸತ್ತಿನಲ್ಲಿ ಗದ್ದಲದ ನಂತರ, ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಫೆಬ್ರವರಿ 6(ಇಂದು) ಕ್ಕೆ ಮುಂದೂಡಿತ್ತು.

ಶುಕ್ರವಾರ ಕಾಂಗ್ರೆಸ್ ಮತ್ತು 16 ವಿರೋಧ ಪಕ್ಷಗಳು ಹಗರಣವನ್ನು ಆರೋಪಿಸಿ ಅದಾನಿ ಗ್ರೂಪ್ ವಿರುದ್ಧದ ಹಿಂದೂನ್‌ಬರ್ಗ್ ವರದಿಯ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿ ದವು.

Read E-Paper click here

error: Content is protected !!