Monday, 16th September 2024

ಐಆರ್‌ಬಿ ಕಾನ್‍ಸ್ಟೆಬಲ್’ಗಳ ಮೇಲೆ ರೈಫಲ್‌ನಿಂದ ಶೂಟ್‌

ಪೋರಬಂದರು: ಕ್ಷುಲ್ಲಕ ವಿಚಾರಕ್ಕೆ ಐಆರ್‌ಬಿ ಕಾನ್‍ಸ್ಟೆಬಲ್ ಸಹೋದ್ಯೋಗಿಗಳ ಮೇಲೆ ರೈಫಲ್‍ನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯ ಗೊಂಡಿ ದ್ದಾರೆ.

ಪೋರಬಂದಿರಿನಿಂದ 25 ಕಿ.ಮೀ ದೂರದಲ್ಲಿರುವ ತುಕಡಾಗೋಸ ಗ್ರಾಮದ ಸೈಕ್ಲೋನ್ ಸೆಂಟರ್‍ನಲ್ಲಿ ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಯೋಧರು ತಂಗಿದ್ದರು. ಕ್ಷುಲ್ಲಕ ವಿಚಾರಕ್ಕೆ ಸಿಆರ್‍ಪಿಎಫ್ ಯೋಧನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ರೈಫಲ್‍ನಿಂದ ಗುಂಡು ಹಾರಿಸಿದ್ದಾನೆ.

ಗಾಯಗೊಂಡವರಲ್ಲಿ ಒಬ್ಬನ ಹೊಟ್ಟೆಗೆ ಹಾಗೂ ಒಬ್ಬನ ಕಾಲಿಗೆ ಗುಂಡು ತಗುಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಮಣಿಪುರ ಎಸ್‍ಎಪಿ ಭಾರತೀಯ ರಿಸರ್ವ್ ಬೆಟಾಲಿಯನ್‍ಗೆ ರೈಫಲ್‍ಮ್ಯಾನ್ ಕಾನ್‍ಸ್ಟೆಬಲ್ ಆಗಿದ್ದು ತನ್ನ ಎಕೆ47 ರೈಫಲ್‍ನಿಂದ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಡಿ.1ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಭದ್ರತೆಗಾಗಿ ಈ ಪಡೆಯನ್ನು ನಿಯೋಜಿಸಲಾಗಿತ್ತು.