Sunday, 8th September 2024

ಹಂಗೇರಿಯಿಂದ ಮರಳಿದ 6711 ವಿದ್ಯಾರ್ಥಿಗಳ ಕೊನೆಯ ತಂಡ

ನವದೆಹಲಿ: ಉಕ್ರೇನ್ ನಿಂದ ಹೊರಟು ಬುಡಾಪೆಸ್ಟ್ ನಲ್ಲಿ ಸಿಲುಕಿಕೊಂಡಿರುವ 6711 ಭಾರತೀಯ ವಿದ್ಯಾರ್ಥಿಗಳ ಕೊನೆಯ ತಂಡದೊಂದಿಗೆ ಇಂದು ಹಂಗೇರಿಯಿಂದ ತಾಯ್ನಾಡಿನತ್ತ ಮರಳಿದರು.

ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ, ಬುಡಾಪೆಸ್ಟ್ ನ ನಮ್ಮ 6711 ವಿದ್ಯಾರ್ಥಿಗಳ ಕೊನೆಯ ತಂಡದೊಂದಿಗೆ ದೆಹಲಿ ತಲುಪಲು ಸಂತೋಷವಾಗಿದೆ. ಯುವಕರು ಮನೆಗೆ ತಲುಪುತ್ತಿದ್ದಂತೆ ಸಂತೋಷ, ಉತ್ಸಾಹ ಹೆಚ್ಚಲಿದೆ. ಶೀಘ್ರದಲ್ಲೇ ಅವರ ಪೋಷಕರು ಮತ್ತು ಕುಟುಂಬಗಳೊಂದಿಗೆ ಇರುತ್ತಾರೆ ಎಂದು ತಿಳಿಸಿದ್ದಾರೆ.

‘ಮಾ.1 ರಂದು ನಮ್ಮನ್ನು ಬುಡಾಪೆಸ್ಟ್ ಗೆ ಹಾರಿಸಿದ 6ನೇ ವಿಮಾನ ನಂತರ ನಮ್ಮ ವಿದ್ಯಾರ್ಥಿಗಳೊಂದಿಗೆ 5ನೇ ಸ್ಥಳಾಂತರ ವಿಮಾನವಾಗಿ ಹಿಂದಿರುಗಿತು. ಕಳೆದ ರಾತ್ರಿ ನಮ್ಮ ವಿದ್ಯಾರ್ಥಿಗಳೊಂದಿಗೆ ದೆಹಲಿಗೆ 31ನೇ ಸ್ಥಳಾಂತರ ವಿಮಾನವನ್ನು ಹತ್ತಿದೆವು ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ಮೂಲಕ ಉಕ್ರೇನ್ ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಕೊನೆಯ ತಂಡವು ಸ್ವದೇಶಕ್ಕೆ ಮರಳಿ ಬಂದಂತಾಗಿದೆ.

error: Content is protected !!