Saturday, 7th September 2024

ಸಾವರ್ಕರ್ ಸಹ ಗೋಮಾಂಸ ಸೇವಿಸಬಹುದು ಎಂದಿದ್ದಾರೆ: ದಿಗ್ವಿಜಯ್ ಸಿಂಗ್

ಭೋಪಾಲ್: ಗೋವನ್ನು ಎಂದಿಗೂ ‘ಮಾತೆ’ ಎಂದು ಪರಿಗಣಿಸಲಾಗಿಲ್ಲ, ಗೋಮಾಂಸ ಸೇವಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಭೋಪಾಲ್‌ನಲ್ಲಿ ಜನ ಜಾಗರಣ ಅಭಿಯಾನದಲ್ಲಿ ಮಾತನಾಡಿ, ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತ ದೊಂದಿಗೆ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ ಎಂದು ಹೇಳಿದ್ದಾರೆ.

ವೀರ್ ಸಾವರ್ಕರ್ ಅವರು ತಮ್ಮ ಪುಸ್ತಕದಲ್ಲಿ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ ಉಲ್ಲೇಖಿಸಿದ್ದಾರೆ. ಅವರು ಗೋವನ್ನು ಮಾತೆ ಎಂದು ಪರಿಗಣಿಸಿಲ್ಲ. ಗೋಮಾಂಸ ಸೇವಿಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ ಅಂತ ತಿಳಿಸಿದ್ದಾರೆ. ಹೀಗಾಗಿ ಗೋಮಾಂಸ ಸೇವಿಸಬಹುದು ಎಂದಿದ್ದಾರೆ.

ನಮ್ಮ ಹೋರಾಟ ಆರ್‌ಎಸ್‌ಎಸ್ ಸಿದ್ಧಾಂತದೊಂದಿಗೆ ಎಂದ ಅವರು 2024 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮೊದಲು ಸಂವಿಧಾನವನ್ನು ಬದಲಾಯಿಸುತ್ತಾರೆ ಮತ್ತು ನಂತರ ಮೀಸಲಾತಿಯನ್ನು ಕೊನೆಗೊಳಿಸು ತ್ತಾರೆ ಎಂದು ಆರೋಪಿಸಿದ್ದಾರೆ.

error: Content is protected !!