Friday, 18th October 2024

ಪದ್ಮವಿಭೂಷಣ ಪುರಸ್ಕೃತ ಬಲ್ವಂತ್ ಮೇದೇಶ್ವರ್ ಪುರಂದರೆ ನಿಧನ

ಪುಣೆ: ಇತಿಹಾಸಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಬಲ್ವಂತ್ ಮೇದೇಶ್ವರ್ ಪುರಂದರೆ(99) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮ ವಾರ ಪುಣೆಯ ಆಸ್ಪತ್ರೆಯಲ್ಲಿ ನಿಧನರಾದರು.

ಪುರಂದರೆ ಅವರಿಗೆ ಒಂದು ವಾರದ ಹಿಂದೆ ನ್ಯೂಮೋನಿಯಾ ತಗಲಿರುವುದು ಪತ್ತೆಯಾಗಿತ್ತು. ಅವರನ್ನು ನಗರದ ದೀನನಾಥ್ ಮಂಗೇಶ್ವರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪುರಂದರೆ ಅವರು ಬಾಬಾ ಸಾಹೇಬ್ ಪುರಂದರ ಎಂದೇ ಜನಪ್ರಿಯರಾಗಿದ್ದರು. ಪುರಂದರೆ ಅವರು ಮರಾಠಿ ಭಾಷೆಯಲ್ಲಿ ಶಿವಾಜಿ ಕುರಿತು 900 ಪುಟಗಳ ಎರಡು ಭಾಗಗಳ ರಾಜಾ ಶಿವ ಛತ್ರಪತಿ ಕೃತಿಯನ್ನು ರಚಿಸಿದ್ದರು.

1950ರ ದಶಕದ ಕೊನೆಯ ಭಾಗದಲ್ಲಿ ಪ್ರಕಟವಾದ ಈ ಕೃತಿ ಮರಾಠಿಗರ ಮನೆ ಮಾತಾಗಿತ್ತು. ಅಸಂಖ್ಯ ಬಾರಿ ಮರು ಮುದ್ರಣ ಗೊಂಡಿತ್ತು. ಪುರಂದರೆ ಅವರು 1980ರ ದಶಕದ ನಡುಭಾಗದಲ್ಲಿ ಶಿವಾಜಿ ಮಹಾರಾಜರ ಜೀವನ ಕುರಿತ ಜಾಂತಾ ರಾಜ ಎಂಬ ಹೆಸರಿನ ಐತಿಹಾಸಿಕ ರಂಗೋತ್ಸವ ನಿರ್ದೇಶಿಸಿದ್ದರು.

1922ರ ಜುಲೈ 29ರಂದು ಜನಿಸಿದ್ದ ಪುರಂದರೆ ಅವರು 2019ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣ ಪುರಸ್ಕೃತರಾಗಿದ್ದರು.