Monday, 16th September 2024

ಗಂಜಿ ಬೇಯಿಸುತ್ತಿದ್ದ ಪಾತ್ರೆಯೊಳಗೆ ಬಿದ್ದ ವ್ಯಕ್ತಿ ಸಾವು

ಚೆನ್ನೈ: ತಮಿಳುನಾಡಿನ ಮಧುರೈನಲ್ಲಿ ಗಂಜಿ ಬೇಯಿಸುತ್ತಿದ್ದ ಬೃಹತ್ ಪಾತ್ರೆಯೊಳಗೆ ಬಿದ್ದು ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಮುತ್ತು ಕುಮಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಜುಲೈ 29ರಂದು ನಡೆದಿರುವುದಾಗಿ ವರದಿ ತಿಳಿಸಿದೆ.

ಗಂಜಿ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದು, ಶೇ.65ರಷ್ಟು ದೇಹದ ಭಾಗ ಸುಟ್ಟು ಹೋಗಿ ದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿ ರುವುದಾಗಿ ವರದಿ ವಿವರಿಸಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಟಿ ವೆಲ್ಲಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ದೇವರನ್ನು ಗೌರವಿಸುವ ನಿಟ್ಟಿನಲ್ಲಿ ತಮಿಳುನಾಡಿನಾದ್ಯಂತ ದೊಡ್ಡ ಪಾತ್ರೆಯಲ್ಲಿ ಗಂಜಿ ಬೇಯಿಸಿ ಸಾರ್ವಜನಿಕರಿಗೆ ವಿತರಿಸುವುದು ವಾಡಿಕೆಯಾಗಿದೆ.

ಮಧುರೈನ ಪಳಂಗನಾಥಂನ ಮುತು ಮರಿಯಮ್ಮಂ ದೇವಸ್ಥಾನದಲ್ಲಿ ಭಕ್ತರಿಗಾಗಿ ಬೃಹತ್ ಪಾತ್ರೆಯಲ್ಲಿ ಗಂಜಿಯನ್ನು ಬೇಯಿ ಸುತ್ತಿದ್ದರು. ಆಗ ಮುತು ಕುಮಾರ್ ಗಂಜಿ ಬೇಯಿಸಲು ಸಹಾಯ ಮಾಡುತ್ತಿದ್ದು, ದಿಢೀರನೆ ತಲೆ ಸುತ್ತು ಬಂದು ಗಂಜಿ ಬೇಯುತ್ತಿದ್ದ ಪಾತ್ರೆಯೊಳಗೆ ಬಿದ್ದುಬಿಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಕ್ಕಪಕ್ಕದಲ್ಲಿ ನೆರೆದಿದ್ದ ಜನರು ಕೂಡಲೇ ಮುತ್ತು ಕುಮಾರ್ ನೆರವಿಗೆ ಆಗಮಿಸಿದ್ದರು, ಆದರೆ ದೊಡ್ಡ ಪಾತ್ರೆಯಿಂದ ಮೇಲಕ್ಕೆ ತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಪಾತ್ರೆಯನ್ನು ಅಡ್ಡ ಕೆಡವಿ ಮುತು ಅವರನ್ನು ರಕ್ಷಿಸಲಾಗಿತ್ತು.