Thursday, 19th September 2024

ಭೀಕರ ರಸ್ತೆ ಅಪಘಾತ: ಮಗು ಸೇರಿ ಆರು ಮಂದಿ ಸಾವು

ಸಂಗ್ರೂರು: ಸುನಮ್‌ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಗುರುವಾರ ನಡೆದಿದೆ. ಟ್ಯಾಂಕರ್​ ಮತ್ತು ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 6 ಜೀವಗಳು ಬಲಿಯಾಗಿವೆ.

ಕಾರಿನಲ್ಲಿ ಹೊರಟ್ಟಿದ್ದ ಆರು ಜನರು ಮಲೇರಕೋಟ್ಲದಲ್ಲಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಮಾರ್ಗಮಧ್ಯೆ ಟ್ಯಾಂಕರ್‌ ವೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ, ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಮಗು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೂವರ ಶವಗಳನ್ನು ಸುನಮ್‌ ಆಸ್ಪತ್ರೆಗೆ ಹಾಗೂ ಇನ್ನೂ ಮೂವರ ಮೃತದೇಹಗಳನ್ನು ಸಂಗ್ರೂರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿರುವ ವಿಜಯ್​ ಕುಮಾರ್​, ಸರಿಯಾದ ದಾರಿಯಲ್ಲೇ ಸಾಗುತ್ತಿದ್ದ ಕಾರು, ರಾಂಗ್​ ಸೈಡ್​ನಲ್ಲಿ ಬರುತ್ತಿದ್ದ ಟಾಂಕರ್​ಗೆ ಡಿಕ್ಕಿ ಹೊಡೆದ ಆ ಕಾರು ನನ್ನ ಕಾರಿಗೂ ಗುದ್ದಿದೆ. ನಾನು ಸುನಮ್‌ ಪ್ರದೇಶಕ್ಕೆ ತೆರಳುತ್ತಿದ್ದಾಗ ಅಪಘಾತ ಜರುಗಿದೆ. ಇದೊಂದು ಭಯಾನಕರ ದುರ್ಘಟನೆ ಎಂದು ವಿಜಯ್​ ಕುಮಾರ್​ ಹೇಳಿದರು. ಇನ್ನು ಈ ದುರಂತದಲ್ಲಿ ಮೃತಪಟ್ಟವರು ಪಂಜಾಬ್​ನ ಸುನಮ್‌ ಪ್ರದೇಶಕ್ಕೆ ಸೇರಿದ್ದಾರೆ.

Leave a Reply

Your email address will not be published. Required fields are marked *