Thursday, 19th September 2024

ಸೋಪೋರ್’ನಲ್ಲಿ ಏಕಾಏಕಿ ಗುಂಡಿನ ದಾಳಿ: ಕೌನ್ಸಿಲರ್, ಪೇದೆ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸೋಪೋರ್ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಸಭೆ ನಡೆಸುತ್ತಿರುವ ವೇಳೆ ಏಕಾಏಕಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ನಗರಸಭಾ ಸದಸ್ಯ ಸೇರಿ ಪೊಲೀಸ್ ಪೇದೆ, ಕೌನ್ಸಿಲರ್ ಹತ್ಯೆಯಾಗಿದ್ದಾರೆ.

ಕೌನ್ಸಿಲರ್ ಸಭೆ ಸೇರಿದ್ದಾಗುತ್ತಿದ್ದಂತೆ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಪೋರ್ ನಗರಸಭೆ ಸದಸ್ಯ ರಿಯಾಜ್ ಅಹಮದ್ ಮೃತಪಟ್ಟಿದ್ದು, ಮತ್ತೊಬ್ಬ ಕೌನ್ಸಿಲರ್ ಗಾಯಗೊಂಡಿದ್ದಾರೆ. ಸಭೆ ನಡೆಯುವ ಸ್ಥಳದ ಹೊರಗೆ ಭದ್ರತಾ ವಿಭಾಗದ ಭಾಗವಾಗಿದ್ದ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಆ ಪ್ರದೇಶವನ್ನ ಕ್ಲೋಸ್‌ ಮಾಡಲಾಯ್ತು. ಕಳೆದ ಐದು ದಿನಗಳಲ್ಲಿ ಕಾಶ್ಮೀರದಲ್ಲಿ ನಡೆದ ಎರಡನೇ ದೊಡ್ಡ ದಾಳಿ ಇದಾಗಿದ್ದು, ಗುರುವಾರ ಶ್ರೀನಗರದ ಹೊರವಲಯದ ಲಾವೇಪೋರಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಇಬ್ಬರು ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *