Thursday, 19th September 2024

ಶೋಪಿಯಾನ್ ಎನ್ಕೌಂಟರ್, ಮೂವರು ಭಯೋತ್ಪಾದಕ ಹತ್ಯೆ

ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿಗಳು ದೊರೆತ ಹಿನ್ನೆಲೆ ಯಲ್ಲಿ ಭಾರತೀಯ ಸೇನಾಪಡೆ ಸ್ಥಳದಲ್ಲಿ ಕಾರ್ಯಾ ಚರಣೆ ಆರಂಭಿಸಿತ್ತು. ಈ ವೇಳೆ, ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ದ್ದಾರೆ. ಕೂಡಲೇ ಸೇನಾಪಡೆ ಸ್ಥಳವನ್ನು ಸುತ್ತುವರೆದು ಕಾರ್ಯಾಚರಣೆಯನ್ನು ಎನ್ಕೌಂಟರ್ ಆಗಿ ಬದಲಿಸಿ ದರು.
ಮೂವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಇಬ್ಬರು ಉಗ್ರರನ್ನು ಲತೀಫ್ ಲೋನೆ ಮತ್ತು ಉಮೆರ್ ನಜೀರ್ ಎಂದು ಗುರ್ತಿಸ ಲಾಗಿದೆ. ಲತೀಫ್ ಕಾಶ್ಮೀರ್ ಪಂಡಿತ್ ಪುರಾನಾ ಕೃಷ್ಣ ಭಟ್ ಹತ್ಯೆ ಪಾಲ್ಗೊಂಡಿದ್ದು, ಉಮೆರ್ ಅನಂತ್ ನಾಗ್ ಜಿಲ್ಲೆಯಲ್ಲಿ ನೇಪಾಳ ಪ್ರಜೆ ಟಿಲ್ ಬಹದ್ದೂರು ಥಾಪಾ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read E-Paper click here