Wednesday, 23rd October 2024

SP Leader controversy: CJI ವಿರುದ್ಧ ಅವಹೇಳನಕಾರಿ ಹೇಳಿಕೆ; ಎಸ್‌ಪಿ ಸಂಸದನಿಂದ ಭಾರೀ ವಿವಾದ; ಬಳಿಕ ಯೂಟರ್ನ್‌

Supreme court

ನವದೆಹಲಿ: ಅಯೋಧ್ಯೆ ಸಮಸ್ಯೆ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ ಎಂದು ಹೇಳಿಕೆ ನೀಡಿದ್ದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ(Supreme Court CJI) ಡಿ.ವೈ.ಚಂದ್ರಚೂಡ್‌(DY Chandrachud) ವಿರುದ್ಧ ಸಮಾಜವಾದಿ ಪಕ್ಷ ಸಂಸದ(SP Leader controversy) ರಾಮ್‌ ಗೋಪಾಲ್‌ ಯಾದವ್‌(Ram Gopal Yadav) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಮ್‌ ಗೋಪಾಲ್‌ ಯಾದವ್‌, ನಾನು ಈ ಬಗ್ಗೆ ಉತ್ತರಿಸಲು ಬಯಸುವುದಿಲ್ಲ. ನೀವು ದೆವ್ವಗಳನ್ನು ಮತ್ತೆ ಜೀವಂತಗೊಳಿಸಿದಾಗ, ನೀವು ಸತ್ತವರನ್ನು ಮತ್ತೆ ಬದುಕಿಸಿದಾಗ, ಅವರು ದೆವ್ವಗಳಾಗುತ್ತಾರೆ ಮತ್ತು ನ್ಯಾಯವನ್ನು ಅನುಸರಿಸಲು ಪ್ರಾರಂಭಿಸುತ್ತಾರೆ. ಅವರು ಈಗ ಎಲ್ಲಿದ್ದಾರೆ?… ಅದನ್ನು ಬಿಡಿ, ಅಂತಹ ಜನರು ಅಂತಹ ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ. ನಾನು ಅವರನ್ನು ಗಂಭೀರವಾಗಿ ಪರಿಗಣಿಸಬೇಕೆ? ” ರಾಮ್ ಗೋಪಾಲ್ ಯಾದವ್ ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದ್ದಾರೆ.

ಅವರ ಹೇಳಿಕೆ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ದೇಶದ ಮುಖ್ಯ ನ್ಯಾಯಮೂರ್ತಿ ವಿರುದ್ಧ ಇಂತಹ ಭಾಷಾ ಪ್ರಯೋಗ ಸರಿಯಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ರಾಮ್‌ ಗೋಪಾಲ್‌ ಯಾದವ್‌ ಸ್ಪಷ್ಟನೆ ನೀಡಿದ್ದಾರೆ. “ಸಿಜೆಐ ಬಗ್ಗೆ ಯಾರೂ ನನ್ನನ್ನು ಏನನ್ನೂ ಕೇಳಲಿಲ್ಲ. ಸಿಜೆಐ ಬಹಳ ಪ್ರತಿಷ್ಠಿತ ವ್ಯಕ್ತಿ. ನಾನು ಅವನ ಮೇಲೆ ಯಾವುದೇ ಕಾಮೆಂಟ್ ಮಾಡಿಲ್ಲ. ಬಹ್ರೈಚ್ ಹಿಂಸಾಚಾರ ಬಗ್ಗೆ ನನ್ನನ್ನು ಪ್ರಶ್ನೆ ಮಾಡಲಾಗಿತ್ತು ನಾನು ಅದಕ್ಕೆ ಉತ್ತರಿಸಿದ್ದೆ ಅಷ್ಟೇ ಎಂದಿದ್ದಾರೆ.

ಸಿಜೆಐ ಹೇಳಿದ್ದೇನು?

ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಇತ್ಯರ್ಥಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ ಮತ್ತು ನಂಬಿಕೆ ಇದ್ದರೆ ದೇವರು ಒಂದು ಮಾರ್ಗವನ್ನು ತೋರಿಸುತ್ತಾನೆ ಎಂದು ಪ್ರತಿಪಾದಿಸಿದರು. ಕೆಲವೊಂದು ಪ್ರಕರಣಗಳಿಗೆ ಬೇಗ ಪರಿಹಾರ ಸಿಗುವುದಿಲ್ಲ. ಅಂತಹದ್ದೇ ಒಂದು ಪ್ರಕರಣವಾಗಿದ್ದು ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ. ಆಗ ನಾನು ದೇವರ ಮುಂದೆ ಕುಳಿತು ಪರಿಹಾರವನ್ನು ತೋರುವಂತೆ ಪ್ರಾರ್ಥಿಸಿದೆ ಎಂದು ಅವರು ಹೇಳಿದರು.

ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ನವೆಂಬರ್ 9, 2019 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಡುವ ಮೂಲಕ ಒಂದು ಶತಮಾನಕ್ಕೂ ಹೆಚ್ಚು ಹಿಂದಿನ ವಿವಾದಾತ್ಮಕ ಸಮಸ್ಯೆಯನ್ನು ಇತ್ಯರ್ಥಪಡಿಸಿತು.

ಈ ಸುದ್ದಿಯನ್ನೂ ಓದಿ: PM degree row: ಪ್ರಧಾನಿ ಮೋದಿ ಪದವಿ ವಿವಾದ; ಸುಪ್ರೀಂನಿಂದ ಮಹತ್ವದ ಆದೇಶ-ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ

ಅಯೋಧ್ಯೆ ಸಮಸ್ಯೆ ಬಗೆಹರಿಯುವಂತೆ ದೇವರಲ್ಲಿ ಪ್ರಾರ್ಥಿಸಿದ್ದೆ ಎಂದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಜೀ ಅವರು ಇತರ ಕೆಲವು ಸಮಸ್ಯೆಗಳ ಬಗ್ಗೆ ಪ್ರಾರ್ಥಿಸಿದ್ದರೆ, ಸಾಮಾನ್ಯ ವ್ಯಕ್ತಿಗೆ ಉನ್ನತ ಅಧಿಕಾರಿಗಳಿಂದ ನ್ಯಾಯ ಸಿಗುವಂತೆಯೇ ಅದೂ ಪರಿಹಾರವಾಗುತ್ತಿತ್ತು. ಯಾವುದೇ ಹಣವಿಲ್ಲದೆ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್. ಇಡಿ, ಸಿಬಿಐ ಮತ್ತು ಐಟಿ ದುರ್ಬಳಕೆ ನಿಲ್ಲುತ್ತಿತ್ತು.