Friday, 18th October 2024

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬೀಳುವ ಭೀತಿಯಲ್ಲಿ 20 ಲಕ್ಷ ಹಣವನ್ನೇ ಸುಟ್ಟುಬಿಟ್ಟ !

ಜೈಪುರ: ರಾಜಸ್ಥಾನದ ಸಿರೋಹಿಯಲ್ಲಿತಹಶೀಲ್ದಾರ, ಎಸಿಬಿ ದಾಳಿಗೆ ಹೆದರಿ ಸುಮಾರು 20 ಲಕ್ಷ ರೂಪಾಯಿಗಳ ನೋಟುಗಳನ್ನೇ ಸುಟ್ಟು ಹಾಕಿದ್ದಾರೆ!

ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಭೂ ದಾಖಲೆ ಬದಲಾವಣೆಗೆ ಸಂಬಂಧಿಸಿದಂತೆ ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಲು ಮುಂದಾಗಿದ್ದರು.

ಅಕ್ರಮವಾಗಿ ಕೂಡಿಟ್ಟಿದ್ದ 20 ಲಕ್ಷ ರೂಪಾಯಿ ಮನೆಯೊಳಕ್ಕೆ ಇತ್ತು. ಪೊಲೀಸರು ದಾಳಿಯಲ್ಲಿ ಸಂಪೂರ್ಣ ಕೃತ್ಯ ಬಯಲಾಗು ವುದು ಎನ್ನುವ ಭೀತಿಯಿಂದ ಮನೆಯೊಳಗೆ ಬೀಗ ಹಾಕಿಕೊಂಡು ಸುಮಾರು 20 ಲಕ್ಷದ ಹಣದ ನೋಟನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಎಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily