Sunday, 27th October 2024

Terror hideout Bust: ಪಾಕ್‌ ಉಗ್ರರ ಅಡಗುತಾಣ ಪುಡಿಗಟ್ಟಿದ ಭಾರತೀಯ ಸೇನೆ; 2 ಗ್ರೆನೇಡ್ಸ್‌, 3 ಗಣಿ ಪತ್ತೆ

terror attack

ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರ(Jammu-Kashmir)ದಲ್ಲಿ ಉಗ್ರ ಉಪಟಳ(Terror Attack) ದಿನೇ ದಿನೆ ಹೆಚ್ಚಾಗುತ್ತಿದೆ. ಭಾರತೀಯ ಸೇನೆ ಪೂಂಛ್‌ನಲ್ಲಿ ಪಾಕಿಸ್ತಾನ ಮೂಲದ ಉಗ್ರರ ಅಡುಗು ತಾಣ(Terror hideout Bust)ವನ್ನು ಧ್ವಂಸ ಮಾಡಿದೆ. ಭಾರತೀಯ ಸೇನೆ ಮತ್ತು ವಿಶೇಷ ಕಾರ್ಯಾಚರಣೆ ಪಡೆ(SOG) ಜಂಟೀ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಸೇನೆಯು ಎರಡು ಗ್ರೆನೇಡ್‌ಗಳು ಮತ್ತು ಮೂರು ಪಾಕಿಸ್ತಾನಿ ಗಣಿಗಳನ್ನು ವಶಕ್ಕೆ ಪಡೆಯಲಾಗಿದೆ.

ಎರಡು ದಿನಗಳ ಹಿಂದೆ ಗುಲ್ಮಾರ್ಗ್‌ ಪ್ರದೇಶದಲ್ಲಿ ಉಗ್ರರ ದಾಳಿಯ ನಂತರ ಸೇನೆ ತಂಗ್ಮಾರ್ಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಇದರ ಭಾಗವಾಗಿ ನಡೆದ ಶೋಧ ಕಾರ್ಯಾಚರಣೆ ವೇಳೆ ಉಗ್ರರ ಅಡಗುತಾಣಗಳನ್ನು ಸೇನೆ ಪುಡಿಗಟ್ಟಿದೆ ಎನ್ನಲಾಗಿದೆ.

ಕಳೆದ ಎರಡು ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಿರಂತವಾಗಿ ಭಯೋತ್ಪಾದಕ ದಾಳಿ (Terror attack ) ನಡೆಯುತ್ತಿದೆ. ಸರಣಿ ದಾಳಿಗಳಲ್ಲಿ ಈ ವರೆಗೆ 19 ಜನ ಮೃತಪಟ್ಟಿದ್ದಾರೆ. ಬಾರಾಮುಲ್ಲಾ( Baramulla district) ಜಿಲ್ಲೆಯ ಗುಲ್ಮಾರ್ಗ್ (Gulmarg) ಬಳಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಅಕ್ಟೋಬರ್ 24 ರಂದು ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು (Military Officers) ಮತ್ತು ಇಬ್ಬರು ನಾಗರಿಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕೆಲವರಿಗೆ ಗಾಯಗಳಾಗಿವೆ. ದಾಳಿಯ ಬಳಿಕ ಎಚ್ಚೆತ್ತ ಭದ್ರತಾ ಪಡೆಗಳು ತಕ್ಷಣವೇ ಗುಲ್ಮಾರ್ಗ್ ಬಳಿಯ ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ.

ಗುಲ್ಮಾರ್ಗ್ ದಾಳಿಯ ಕೆಲವು ಗಂಟೆಗಳ ಮೊದಲು, ಪುಲ್ವಾಮಾ (Pulwama)ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಉತ್ತರ ಪ್ರದೇಶದ ಕಾರ್ಮಿಕನಿಗೆ ಗುಂಡೇಟು ತಗುಲಿ ಗಾಯವಾಗಿತ್ತು. ಈ ದಾಳಿಯು ನಾಗರಿಕರು ಮತ್ತು ಹೊರ ರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿ ಮಾಡಿರುವ ದಾಳಿಯಾಗಿದೆ . ಅಕ್ಟೋಬರ್ 20ರಂದು ಕಾಶ್ಮೀರದ‌ ಗಂದರ್‌ಬಾಲ್ ಜಿಲ್ಲೆಯ ಜೊ-ಮೊರ್ (Z-Morh) ಸುರಂಗ ನಿರ್ಮಾಣ ಸ್ಥಳದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಆರು ಮಂದಿ ಹೊರ ರಾಜ್ಯದ ಕಾರ್ಮಿಕರು ಮತ್ತು ಸ್ಥಳೀಯ ವೈದ್ಯ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು. ಕೇವಲ ನಾಲ್ಕು ದಿನಗಳ ನಂತರ ಮತ್ತೆ ದಾಳಿ ಮಾಡಲಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ, ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಏಳು ಭಯೋತ್ಪಾದಕ ದಾಳಿಗಳು ನಡೆದಿವೆ.

ಅಕ್ಟೋಬರ್ 18 ರಂದು ಶೋಪಿಯಾನ್ ಜಿಲ್ಲೆಯಲ್ಲಿ ಬಿಹಾರದ ಕಾರ್ಮಿಕನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಆ ವ್ಯಕ್ತಿಗೆ ಸುಮಾರು ಹನ್ನೆರಡು ಬಾರಿ ಗುಂಡು ಹಾರಿಸಲಾಗಿದ್ದು, ಆತನ ದೇಹ ಜೈನಪೋರಾದ ವಾಚಿ ಪ್ರದೇಶದಲ್ಲಿ ಜಮೀನಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಅಕ್ಟೋಬರ್ 9ರಂದು ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಪ್ರಾದೇಶಿಕ ಸೇನಾ ಯೋಧನ ಶವ ಪತ್ತೆಯಾಗಿದೆ. ಮೃತ ಯೋಧನ್ನು ಹಿಲಾಲ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Terror Attack: ಜಮ್ಮು & ಕಾಶ್ಮೀರದಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ; 4 ಮಂದಿ ಬಲಿ