Monday, 7th October 2024

Tirupati Laddu Row : ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಎಸ್ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

Tirupati Laddu Row

ಬೆಂಗಳೂರು: ತಿರುಪತಿ ಲಡ್ಡುಗಳ ಕಲಬೆರಕೆ ವಿವಾದದ ಕುರಿತ (Tirupati Laddu Row) ತನಿಖೆ ನಡೆಸುತ್ತಿರುವ ಆಂಧ್ರ ಪ್ರದೇಶ ಪೊಲೀಸ್ ವಿಭಾಗದ ವಿಶೇಷ ತನಿಖಾ ತಂಡದ (ಎಸ್ಐಟಿ) ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪ್ರಕರಣ ಸುಪ್ರೀಂ ಕೋರ್ಟ್ ವ್ಯಾಪ್ತಿಯಲ್ಲಿರುವುದರಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಆಂಧ್ರಪ್ರದೇಶ ಡಿಜಿಪಿ ಮಂಗಳವಾರ ತಿಳಿಸಿದ್ದಾರೆ.

ಮೊದಲು ಎಸ್ಐಟಿ ತನಿಖಾ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅಧ್ಯಯನ ಮಾಡಬೇಕಾಗಿದೆ. ಎಲ್ಲಾ ಮಾಹಿತಿ ಪಡೆಯಬೇಕು. ಇವೆಲ್ಲದರ ನಡುವೆ ಸುಪ್ರೀಂ ಕೋರ್ಟ್‌ನಿಂದ ಆದೇಶ ಬಂದಿದೆ. ಅದಕ್ಕೆ ಅನುಗುಣವಾಗಿ ನಾವು ಅದನ್ನು ತನಿಖೆಯನ್ನು ನಿಲ್ಲಿಸಿದ್ದೇವೆ ಎಂದು ಆಂಧ್ರಪ್ರದೇಶದ ಉನ್ನತ ಪೊಲೀಸ್ ದ್ವಾರಕಾ ತಿರುಮಲ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೋಮವಾರ, ಎಸ್ಐಟಿ ತಿರುಮಲದ ಹಿಟ್ಟಿನ ಗಿರಣಿಯನ್ನು ಪರಿಶೀಲಿಸಿದೆ. ಅಲ್ಲಿ ತುಪ್ಪವನ್ನು ಸಂಗ್ರಹಿಸಲಾಗುತ್ತದೆ ಮತ್ತು ಲಡ್ಡುಗಳನ್ನು ತಯಾರಿಸಲು ಬಳಸುವ ಮೊದಲು ಇಲ್ಲಿನ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ.

ದೇವರನ್ನು ರಾಜಕೀಯದಿಂದ ದೂರವಿಡಿ: ಲಡ್ಡು ಸುಪ್ರೀಂ ಕೋರ್ಟ್

ದೇವರುಗಳನ್ನು ರಾಜಕೀಯದಿಂದ ದೂರವಿಡಬೇಕು ಎಂದು ಸೋಮವಾರ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅಡಿಯಲ್ಲಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಹೇಳಿಕೆಯನ್ನು ಆಕ್ಷೇಪಿಸಿದೆ.

ಇದನ್ನೂ ಓದಿ: Lebanon pager blast: ಪೇಜರ್‌ ಬ್ಲಾಸ್ಟ್‌ನಲ್ಲಿ ಕೇರಳದ ರಿನ್ಸನ್‌ ಜೋಸ್‌ ಕೈವಾಡ; ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಿದ ನಾರ್ವೆ

ಇದು ಲಡ್ಡು ತಯಾರಿಸಲು ಬಳಸಲಾದ ತುಪ್ಪವಲ್ಲ ಎಂದು ವರದಿಯಿಂದ ಬಹಳ ಸ್ಪಷ್ಟವಾಗಿದೆ. ನಿಮಗೆ ಖಚಿತವಿಲ್ಲದಿದ್ದರೆ ನೀವು ಅದನ್ನು ಸಾರ್ವಜನಿಕವಾಗಿ ಹೇಗೆ ಬಹಿರಂಗಪಡಿಸಿದ್ದೀರಿ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ನ್ಯಾಯಪೀಠ ಪ್ರಶ್ನಿಸಿತು.

ಯಾವುದೂ ಸ್ಪಷ್ಟವಾಗಿಲ್ಲ. ತಿರಸ್ಕರಿಸಿದ ತುಪ್ಪ ಎಂದು ಮೇಲ್ನೋಟಕ್ಕೆ ಸೂಚಿಸಲಾಗಿದೆ. ಅವುಗಳ ಪರೀಕ್ಷೆಗೆ ಒಳಪಡಿಸಲಾಗಿದೆ. ನೀವೇ ತನಿಖೆಗೆ ಆದೇಶಿಸಿದ್ದರೆ, ಮಾಧ್ಯಮಗಳ ಮುಂದೆ ಹೋಗುವ ಅಗತ್ಯವೇನಿದೆ ಎಂದು ನ್ಯಾಯಪೀಠ ಆಂಧ್ರಪ್ರದೇಶದ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನುಪ್ರಶ್ನಿಸಿತ್ತು.