Monday, 16th September 2024

ಪೂರ್ವ ಮಿಡ್ನಾಪುರದಲ್ಲಿ ಗುಂಡಿನ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು ಪೂರ್ವ ಮಿಡ್ನಾಪುರದ ಸತ್ಸತ್ಮಾಲ್ ಭಗವನ್’ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿನ ದಾಳಿ ನಡೆದು ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗೊಂಡರು.

ಮತದಾನ ಆರಂಭಕ್ಕೆ ಮುನ್ನ ಈ ಘಟನೆ ನಡೆದಿದೆ. ಪಶ್ಚಿಮ ಮಿಡ್ನಾಪುರದ ಶಲ್ಬೊನಿಯಲ್ಲಿ ಸಿಪಿಎಂ ಅಭ್ಯರ್ಥಿ ಸುಶಾಂತ ಘೋಷ್ ವಾಹನದ ಮೇಲೆಯೂ ದಾಳಿ ನಡೆದಿದೆ.

ತಾವು ಟಿಎಂಸಿಗೆ ಮತ ಹಾಕಿದ್ದರೂ ವಿವಿಪ್ಯಾಟ್ ನಲ್ಲಿ ಬಿಜೆಪಿ ಎಂದು ತೋರಿಸುತ್ತಿದೆ ಎಂದು ಮತದಾರರು ಆರೋಪಿಸಿದ ಕಾರಣ ಪೂರ್ವ ಮಿಡ್ನಾಪುರದ ದಕ್ಷಿಣ ಕ್ಷೇತ್ರದ ಮತಗಟ್ಟೆಯಲ್ಲಿ ಮತದಾನ ರದ್ದುಗೊಳಿಸಲಾಗಿದೆ. ಆದರೆ ಮತಗಟ್ಟೆ ಅಧಿಕಾರಿ ಈ ಆರೋಪ ತಳ್ಳಿಹಾಕಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *