Monday, 16th September 2024

ಮೇಲ್ಮನೆಯಲ್ಲಿ ಭುಗಿಲೆದ್ದ ಗದ್ದಲ: ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಭಾವುಕ

ನವದೆಹಲಿ : ಸದನದಲ್ಲಿ ಸಂಸದರ ವರ್ತನೆಯ ಬಗ್ಗೆಯೂ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ದುಃಖ ವ್ಯಕ್ತಪಡಿಸಿದ್ದು, ‘ಕೆಲವು ಸದಸ್ಯರು ಮೇಜಿನ ಮೇಲೆ ಜಿಗಿದಾಗ ಸದನದ ಪಾವಿತ್ರ್ಯವನ್ನು ಉಲ್ಲಂಘಿಸಲಾಗಿದೆ’ ಎಂದು ಹೇಳಿದರು.

ಮಂಗಳವಾರ ಮೇಲ್ಮನೆಯಲ್ಲಿ ಭುಗಿಲೆದ್ದ ಗದ್ದಲವನ್ನು ಖಂಡಿಸಿದ ಸಂದರ್ಭದಲ್ಲಿ ಭಾವುಕರಾಗಿದ್ದರು. ಕೆಲವು ವಿರೋಧ ಪಕ್ಷದ ಸಂಸತ್ ಸದಸ್ಯರು ಮೇಜಿನ ಮೇಲೆ ಹತ್ತಿದ ಬಗ್ಗೆ ‘ತೀವ್ರ ದುಃಖ’ ವ್ಯಕ್ತಪಡಿಸಿದ ನಾಯ್ಡು, ‘ನಾನು ತುಂಬಾ ದುಃಖಿತನಾಗಿದ್ದೆ , ತೀವ್ರ ದುಃಖಿತನಾಗಿದ್ದೇನೆ. ನಿದ್ರೆಯಿಲ್ಲದ ರಾತ್ರಿಯನ್ನು ಕಳೆದಿರುವು ದರಿಂದ ನನ್ನ ದುಃಖವನ್ನು ತಿಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಹೊಸ ಸುಧಾರಣಾ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಬಗ್ಗೆ ಸದನವು ಚರ್ಚೆ ಪ್ರಾರಂಭಿಸಿದಾಗ ವಿಪಕ್ಷದ ಸಂಸದರು ಅಧಿಕಾರಿಗಳ ಮೇಜಿನ ಮೇಲೆ ಹತ್ತಿ ಕಪ್ಪು ಬಟ್ಟೆ ಬೀಸಿದರು ಮತ್ತು ಕಡತಗಳನ್ನು ಎಸೆ ದರು.

ಹಲವಾರು ಸಂಸತ್ ಸದಸ್ಯರು ಸಂಸದೀಯ ಸಿಬ್ಬಂದಿ ಕುಳಿತಿರುವ ಮೇಜಿನ ಮೇಲೆ ನಿಂತಿದ್ದರು, ಇತರರು ಅದರ ಸುತ್ತಲೂ ಕಿಕ್ಕಿರಿದು ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗಿದರು. ಇದಲ್ಲದೆ, ಕೆಲವು ಸದಸ್ಯರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮೇಜುಗಳ ಮೇಲೆ ಕುಳಿತರು, ಈ ಸಮಯದಲ್ಲಿ ಕಲಾಪಗಳನ್ನು ಅನೇಕ ಬಾರಿ ಮುಂದೂಡಲಾಯಿತು.

ಬುಧವಾರವೂ ಸಹ, ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಹಿಂದಿನ ದಿನ ಸದನದಲ್ಲಿ ಕೆಲವು ಸದಸ್ಯರ ನಡವಳಿಕೆಯ ಬಗ್ಗೆ ಹೇಳಿಕೆ ನೀಡಿದಾಗ, ಕೆಲವು ವಿರೋಧ ಪಕ್ಷದ ನಾಯಕರು ವಿವಿಧ ವಿಷಯಗಳ ಬಗ್ಗೆ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು.

Leave a Reply

Your email address will not be published. Required fields are marked *