Sunday, 8th September 2024

ಮೂರನೇ ಬಾರಿ `ವಂದೇ ಭಾರತ’ ರೈಲಿನ ಮೇಲೆ ಕಲ್ಲು ತೂರಾಟ

ಕೋಲ್ಕತ್ತಾ: ಬಂಗಾಲದಲ್ಲಿ ಒಂದು ವಾರದಲ್ಲಿ `ವಂದೇ ಭಾರತ’ ಎಕ್ಸ್ಪ್ರೆಸ್ ಈ ರೈಲಿನ ಮೇಲೆ ಕಲ್ಲು ತೂರಾಟದ ೩ ನೇ ಘಟನೆ ಯಾಗಿದೆ. ಬಾರೋಸಯಿ ರೈಲು ನಿಲ್ದಾಣದ ಬಳಿ `ವಂದೇ ಭಾರತ’ ಎಕ್ಸಪ್ರೆಸ್ಸಿನ ಸಿಸೀ-೧೪ ಭೋಗಿಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

ಈ ಘಟನೆಯಿಂದ ರೈಲು ಬೋಲಪುರ ನಿಲ್ದಾಣದಲ್ಲಿ ಬಹಳ ಸಮಯ ನಿಲ್ಲಿಸಬೇಕಾಯಿತು. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಅಪಾಯ ಆಗಲಿಲ್ಲ.

ಡಿಸೆಂಬರ್ ೩೦, ೨೦೨೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಗಾಲದಲ್ಲಿ `ವಂದೇ ಭಾರತ’ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ನಂತರ ಜನವರಿ ೨ ರಂದು ರಾತ್ರಿ ಮಲದಾ ಇಲ್ಲಿ ಈ ರೈಲಿನ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಜನವರಿ ೩ ರಂದು ಕಿಶನಗಂಜ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು.

ಬಂಗಾಲದಲ್ಲಿನ ವಿರೋಧಿ ಪಕ್ಷದ ಮುಖಂಡರು ಮತ್ತು ಭಾಜಪದ ನಾಯಕ ಶುಭೆಂದು ಅಧಿಕಾರಿ ಇವರು ಈ ಘಟನೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸಲು ಆಗ್ರಹಿಸಿದ್ದರು.

Read E-Paper click here

 

error: Content is protected !!