Friday, 20th September 2024

ಯುವಕನ ಜೀವನ ಆಸಿಡ್ ದಾಳಿಯಲ್ಲಿ ಅಂತ್ಯ !

ತಿರುವನಂತಪುರಂ: ವಿವಾಹಿತ ಮಹಿಳೆಯೊಂದಿಗಿನ ಪ್ರೀತಿ ಯುವಕನ ಜೀವನವನ್ನು ಆಸಿಡ್ ದಾಳಿಯಲ್ಲಿ ಅಂತ್ಯಗೊಳಿಸಿದೆ. ಘಟನೆ ಕೇರಳದ ತಿರುವ ನಂತಪುರಂ ನಲ್ಲಿ ನಡೆದಿದೆ.

ಫೇಸ್ ಬುಕ್ ಮೂಲಕ 35 ವರ್ಷದ ಷಿಬಾ ಎಂಬಾಕೆಯನ್ನು ಪರಿಚಯ ಮಾಡಿ ಕೊಂಡ 28 ವರ್ಷದ ಅರುಣ್ ಕುಮಾರ್ ಎಂಬ ಯುವಕ ಆಕೆಯ ಪ್ರೀತಿಯಲ್ಲಿ ಸಿಲುಕಿದ್ದಾನೆ.

ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಬಳಿಕ ಮದುವೆಯಾಗುವ ನಿರ್ಧಾರಕ್ಕೂ ಬಂದಿದ್ದಾರೆ. ಆದರೆ ಅಷ್ಟರಲ್ಲಿ ತನ್ನ ಪ್ರೀತಿಯ ಹುಡುಗಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂಬ ವಿಷಯ ಅರಿವಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಮಹಿಳೆಯಿಂದ ದೂರ ವಾಗಲು ಯುವಕ ನಿರ್ಧರಿಸಿ, ಮದುವೆಯಾ ಗಲು ನಿರಾಕರಿಸಿದ್ದಾನೆ. ಕೋಪಗೊಂಡ ಮಹಿಳೆ ತಿರುವಂತಪುರಂ ಬಳಿ ಯುವಕನ ಮೇಲೆ ಆಸಿಡ್ ದಾಳಿ ನಡೆಸಿದ್ದಾಳೆ.

ದಾಳಿಗೊಳಗಾದ ಯುವಕ ಅರುಣ್ ಕುಮಾರ್ ಮುಖ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಯುವಕ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಯುವಕನ ದೂರಿನ ಮೇರೆಗೆ ಇದೀಗ 35 ವರ್ಷದ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.