Friday, 25th October 2024

Baby Death: 8 ವರ್ಷದ ಬಳಿಕ ಜನಿಸಿದ ಕಂದ 19ನೇ ದಿನಕ್ಕೆ ಕೊಲೆಯಾಯ್ತು; ಕೊಂದವರು ಯಾರು?

Baby Death

ರಾಜಸ್ಥಾನ: ರಾಜಸ್ಥಾನದ ನೀಮ್ಕಥಾನಾ ಜಿಲ್ಲೆಯಲ್ಲಿ 19 ದಿನದ ಮಗುವನ್ನು ನೀರಿನ ಟ್ಯಾಂಕಿಗೆ ಎಸೆದು  ಕೊಲೆ(Baby Death) ಮಾಡಿದ ದಾರುಣವಾದ ಘಟನೆಯೊಂದು ನಡೆದಿದೆ. ಇದನ್ನು ನೋಡಿ ಪೊಲೀಸರು ಮತ್ತು ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ವರದಿ ಪ್ರಕಾರ, ಮದುವೆಯಾಗಿ ಮಕ್ಕಳಾಗದ ದಂಪತಿಗೆ 8 ವರ್ಷಗಳ ಬಳಿಕ ಗಂಡು ಮಗುವೊಂದು ಜನಿಸಿದೆ. ರಾತ್ರಿ  ಮಗು ತನ್ನ ಅಜ್ಜಿ ಮತ್ತು ತಾಯಿಯ ನಡುವೆ ಮಲಗಿದ್ದಾಗ ತಡರಾತ್ರಿ ಇದ್ದಕ್ಕಿದ್ದಂತೆ  ಕಣ್ಮರೆಯಾಗಿದೆ. ಮರುದಿನ ಬೆಳಿಗ್ಗೆ ಮಗುವನ್ನು ಹುಡುಕಿದಾಗ ಮಗುವಿನ ಮೃತ ದೇಹವು ಮನೆಯ ನೀರಿನ ಟ್ಯಾಂಕ್‍ನಲ್ಲಿ ಬಿದ್ದಿರುವುದು ಕಂಡುಬಂದಿದೆ. ಇಡೀ ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಈ ಘಟನೆಯ ಬಗ್ಗೆ ದಾಬ್ಲಾ ಪೊಲೀಸ್ ಠಾಣೆಯ ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

ಮಗುವಿನ  ತಂದೆ ಕೃಷ್ಣ ಕುಮಾರ್ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ಕುಮಾರ್ ರಾತ್ರಿ 12:00 ರ ಸುಮಾರಿಗೆ ನೈಟ್ ಡ್ಯೂಟಿಗೆ ಹೋಗಿದ್ದರು. ತಾಯಿ ಸರೋಜ್ ದೇವಿ ಮತ್ತು ಅಜ್ಜಿ ಮೇವಾ ದೇವಿಯ  ಮಧ‍್ಯದಲ್ಲಿ19 ದಿನಗಳ ನವಜಾತ ಶಿಶು ಮಲಗಿತ್ತು. ಮುಂಜಾನೆ ಎದ್ದು ನೋಡಿದಾಗ ಮಗು  ಅಲ್ಲಿರಲಿಲ್ಲ. ಇಡೀ ಮನೆಯನ್ನು ಹುಡುಕಾಡಿದಾಗ ಮಗುವಿನ ಶವ ನೀರಿನ ಟ್ಯಾಂಕ್ ಒಳಗೆ ಪತ್ತೆಯಾಗಿದೆ.

ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೊಲೀಸರು ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಮಗುವನ್ನು ಕಳೆದುಕೊಂಡ ತಾಯಿ ಮತ್ತು ಅಜ್ಜಿಯ ಸ್ಥಿತಿ  ಗಂಭೀರವಾಗಿದೆ ಎನ್ನಲಾಗಿದೆ. ಕೊಲೆಗಾರನನ್ನು ಬಂಧಿಸುವಂತೆ ಒತ್ತಾಯಿಸಿ  ಕುಟುಂಬ ಸದಸ್ಯರು ಧರಣಿ ಮಾಡಿದ್ದಾರೆ. ತನಗೆ ಯಾರೊಂದಿಗೂ ದ್ವೇಷವಿಲ್ಲ ಎಂದು ಮಗುವಿನ ತಂದೆ ಕೂಡ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಅತ್ಯಾಚಾರಿಗಳಿಗಲ್ಲ, ಅತ್ಯಾಚಾರಕ್ಕೆ ಒಳಗಾದವರಿಗೆ ಈ ದೇಶದಲ್ಲಿ ಗಲ್ಲು ಶಿಕ್ಷೆ!

ಕೊಲೆಯ ಸಮಯದಲ್ಲಿ, ಮಗುವಿನ ತಾಯಿ, ಅಜ್ಜಿ ಮತ್ತು ಚಿಕ್ಕಮ್ಮ ಮಾತ್ರ ಮನೆಯಲ್ಲಿದ್ದರು. ಹಾಗಾಗಿ ಪೊಲೀಸರು ಈ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಘಟನೆಯಿಂದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.