Chikkaballapur Crime: ಅನಧಿಕೃತವಾಗಿ ಬಳಸುತ್ತಿದ್ದ ಸಿಲಿಂಡರ್ ಗಳ ವಶಕ್ಕೆ ಪಡೆದ ಆಹಾರ ಇಲಾಖೆ
ಆಹಾರ ಶಿರಸ್ತೆದಾರರಾದ ಎ ಎನ್ ನಟರಾಜ ರೆಡ್ಡಿ ಹಾಗೂ ಆಹಾರ ನಿರೀಕ್ಷಕರು ದಾಳಿ ನಡೆಸಿ ಚಿಂತಾ ಮಣಿ ತಾಲ್ಲೂಕಿನ ಬುರುಡಗುಂಟೆ. ಏನಿಗದೆಲೆ, ಮಿಂಚಿಲಹಳ್ಳಿ ಕ್ರಾಸ್ ಕೆಂಚಾರಹಳ್ಳಿ ಗ್ರಾಮಗಳ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 15 ಸಿಲೆಂಡರ್ ಗಳನ್ನು ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿದ್ದಾರೆ.


ಚಿಂತಾಮಣಿ: ಟೀ ಅಂಗಡಿ,ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ಗಳ ಅಂಗಡಿಗಳಲ್ಲಿ ಅನಧಿಕೃತ ವಾಗಿ ಗೃಹಬಳಕೆ ಅನಿಲ ಸಿಲಿಂಡರ್ ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿದ್ದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 15 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ ಶಿರಸ್ತೆದಾರರಾದ ಎ ಎನ್ ನಟರಾಜ ರೆಡ್ಡಿ ಹಾಗೂ ಆಹಾರ ನಿರೀಕ್ಷಕರು ದಾಳಿ ನಡೆಸಿ ಚಿಂತಾಮಣಿ ತಾಲ್ಲೂಕಿನ ಬುರುಡಗುಂಟೆ. ಏನಿಗದೆಲೆ, ಮಿಂಚಿಲಹಳ್ಳಿ ಕ್ರಾಸ್ ಕೆಂಚಾರಹಳ್ಳಿ ಗ್ರಾಮಗಳ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ 15 ಸಿಲೆಂಡರ್ ಗಳನ್ನು ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ: Cyber Crime : ಪೋರ್ನ್ ವಿಡಿಯೋಗಳನ್ನು ನೋಡುವ ಚಟ ನಿಮಗೂ ಇದೆಯೇ? ಹಾಗಾದ್ರೆ ಈ ವಂಚನೆಗೆ ಒಳಗಾಗಬಹುದು ಹುಶಾರ್!
ಆಹಾರ ಶಿರಸ್ತೇರರಾದ ಎನ್ ನಟರಾಜ ರೆಡ್ಡಿ ರವರು ಈ ವೇಳೆ ಮಾತನಾಡಿ ಗೃಹಬಲಿಕೆ ಅನಿಲ ಸಿಲೆಂಡರ್ ಗಳನ್ನು ಟೀ ಹಾಗೂ ಇತರೆ ಅಂಗಡಿಗಳ ಮಾಲೀಕರು ವಾಣಿಜ್ಯ ಬಳಿಕೆಗೆ ಉಪಯೋಗಿಸಿ ದರೆ ಅಂತಹವರ ವಿರುದ್ಧ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.