ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಶಾಸಕನಿಗೆ ಸೀಟ್ ಬಿಟ್ಟುಕೊಡದ ಪ್ರಯಾಣಿಕನ ಮೇಲೆ ಹಲ್ಲೆ: ವಿಡಿಯೋ ವೈರಲ್
Vande Bharat Train: ದೆಹಲಿ-ಭೋಪಾಲ್ ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಶಾಸಕರಿಗೆ ತನ್ನ ಸೀಟ್ ಬಿಟ್ಟುಕೊಡಲು ನಿರಾಕರಿಸಿದ ಪ್ರಯಾಣಿಕನ ಮೇಲೆ ಹಲ್ಲೆ ನಡೆದ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಝಾನ್ಸಿಯ ಬಿಜೆಪಿ ಶಾಸಕ ರಾಜೀವ್ ಸಿಂಗ್ ತಮ್ಮ ಪತ್ನಿ ಮತ್ತು ಮಗನೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಸಾಂದರ್ಭಿಕ ಚಿತ್ರ.

ನವದೆಹಲಿ: ದೆಹಲಿ-ಭೋಪಾಲ್ (Delhi-Bhopal) ವಂದೇ ಭಾರತ್ ರೈಲಿನಲ್ಲಿ (Vande Bharat Train) ಬಿಜೆಪಿ ಶಾಸಕರಿಗೆ (BJP MLA) ತನ್ನ ಸೀಟ್ ಬಿಟ್ಟುಕೊಡಲು ನಿರಾಕರಿಸಿದ ಪ್ರಯಾಣಿಕನ (Passenger) ಮೇಲೆ ಹಲ್ಲೆ ನಡೆದ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಝಾನ್ಸಿಯ ಬಿಜೆಪಿ ಶಾಸಕ ರಾಜೀವ್ ಸಿಂಗ್ (Rajeev Singh) ಪತ್ನಿ ಮತ್ತು ಮಗನೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದೆ.
ರಾಜೀವ್ ಸಿಂಗ್ಗೆ ರೈಲಿನ ಕೋಚ್ನ ಹಿಂಭಾಗದಲ್ಲಿ ಸೀಟ್ ದೊರೆತಿತ್ತು. ಆದರೆ ಅವರ ಕುಟುಂಬ ಸದಸ್ಯರು ಮುಂಭಾಗದಲ್ಲಿ ಭೋಪಾಲ್ಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಪಕ್ಕದ ಸೀಟ್ನಲ್ಲಿದ್ದರು. ಈ ವ್ಯಕ್ತಿ ಸೀಟ್ ಬದಲಾಯಿಸಲು ಒಪ್ಪದಿದ್ದಕ್ಕೆ ವಿವಾದ ಉಂಟಾಯಿತು. ಝಾನ್ಸಿ ರೈಲು ನಿಲ್ದಾಣದಲ್ಲಿ ರಾಜೀವ್ ಸಿಂಗ್ಗೆ ಸಂಬಂಧಿಸಿದ ಕೆಲವರು ರೈಲು ಏರಿದ ಬಳಿಕ, ಸೀಟ್ನಲ್ಲಿದ್ದ ಆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವೈರಲ್ ವಿಡಿಯೊ ಇಲ್ಲಿದೆ:
A BJP MLA on Vande Bharat requested a window seat from a co-passenger, who refused.
— Kapil (@kapsology) June 23, 2025
The MLA made a call, and at the next station, men boarded the train and assaulted the passenger.
No arrests have been made yet.pic.twitter.com/88tvLk3tLf
ಈ ಸುದ್ದಿಯನ್ನೂ ಓದಿ: Viral Video: ಕೆನಡಾಕ್ಕಿಂತ ಭಾರತ ಬೆಸ್ಟ್ ಎಂದ ಅಲ್ಲಿನ ಕಂಟೆಂಟ್ ಕ್ರಿಯೇಟರ್; ಕಾರಣವೇನು ಗೊತ್ತಾ?
ವೈರಲ್ ಆಗಿರುವ ವಿಡಿಯೊದಲ್ಲಿ ಆರು ಮಂದಿ ಪ್ರಯಾಣಿಕನ ಮೇಲೆ ದಾಳಿ ಮಾಡುತ್ತಿರುವುದು ಮತ್ತು ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬಂದಿದೆ. ವಿಡಿಯೊದಲ್ಲಿ ಪ್ರಯಾಣಿಕನ ಮೂಗಿನಿಂದ ರಕ್ತ ಸೋರುತ್ತಿರುವುದು ಮತ್ತು ಅವರ ಬಟ್ಟೆಗಳು ರಕ್ತದಿಂದ ಒದ್ದೆಯಾಗಿರುವುದು ಕೂಡ ಗೋಚರಿಸುತ್ತಿದೆ. ಝಾನ್ಸಿಯ ರೈಲ್ವೆ ಪೊಲೀಸ್ ಅಧೀಕ್ಷಕ ವಿಪುಲ್ ಕುಮಾರ್ ಶ್ರೀವಾಸ್ತವ, ಸೀಟ್ ಬದಲಾವಣೆಯ ವಿವಾದದಿಂದ ಈ ಘಟನೆ ಸಂಭವಿಸಿದೆ ಎಂದು ದೃಢಪಡಿಸಿದ್ದಾರೆ. "ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.
ಝಾನ್ಸಿಯ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ), ರಾಜೀವ್ ಸಿಂಗ್ ಅವರ ದೂರಿನ ಆಧಾರದ ಮೇಲೆ ಎನ್ಸಿಆರ್ ದಾಖಲಿಸಿದ್ದಾರೆ. ಸಿಂಗ್ ತಮ್ಮ ದೂರಿನಲ್ಲಿ, ಪ್ರಯಾಣದ ವೇಳೆ ಒಬ್ಬ ಸಹಪ್ರಯಾಣಿಕ ಅಸಭ್ಯವಾಗಿ ವರ್ತಿಸಿದ್ದಾಗಿ, ಆಕ್ಷೇಪಿಸಿದಾಗ ಅವನು ಕುಟುಂಬದ ಜತೆಗೆ ದುರ್ವರ್ತನೆ ತೋರಿದ್ದಾಗಿ ಆರೋಪಿಸಿದ್ದಾರೆ.