Thursday, 19th September 2024

ಬಜೆಟ್‌ ಪೂರ್ವಭಾವಿ ಸಭೆ ಇಂದಿನಿಂದ

ಬೆಂಗಳೂರು: ಕಾಂಗ್ರೆಸ್‌ ಸರಕಾರದ ಚೊಚ್ಚಲ ಬಜೆಟ್‌ ಹಾಗೂ ತಮ್ಮ 14ನೇ ಬಜೆಟ್‌ ಮಂಡನೆ ಪ್ರಕ್ರಿಯೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲಿರುವ ಸಿಎಂ ಸಿದ್ದರಾಮಯ್ಯನವರು ಬುಧವಾರದಿಂದ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ.

ಸರಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಭಾರೀ ಮೊತ್ತದ ಅನುದಾನ ಹಂಚಿಕೆ ಮಾಡಲು ದೊಡ್ಡ ಆರ್ಥಿಕ ಸಂಪನ್ಮೂಲ ಬೇಕಾಗುವುದರಿಂದ ಹೊಸ ಘೋಷಣೆಗಳು ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕ ಹೊರೆ ಆಗದಂತಹ ಹೊಸ ಪ್ರಸ್ತಾವನೆಗಳನ್ನಷ್ಟೇ ತರುವಂತೆ ಆಯಾ ಇಲಾಖೆಗಳಿಗೆ ಆರ್ಥಿಕ ಇಲಾಖೆ ಸೂಚನೆ ರವಾನಿಸಿದೆ.

ಜೂನ್‌ 14ರಿಂದ 17ರ ವರೆಗೆ ನಾಲ್ಕು ದಿನ ಬಜೆಟ್‌ ಪೂರ್ವಭಾವಿ ಮ್ಯಾರಥಾನ್‌ ಸಭೆಗಳು ನಡೆಯಲಿವೆ. ಪ್ರತೀ ಇಲಾಖೆಗೆ 30ರಿಂದ 40 ನಿಮಿಷ ಕಾಲಾವ ಕಾಶ ನೀಡಲಾಗಿದೆ.

ಸಮಯದ ಆಭಾವದ ಹಿನ್ನೆಲೆಯಲ್ಲಿ ಹೊಸ ಬಜೆಟ್‌ ಘೋಷಣೆ, ಯೋಜನೆ, ಕಾರ್ಯಕ್ರಮಗಳು ಮತ್ತು ಚಾಲ್ತಿ ಯೋಜನೆಗಳ ಪೈಕಿ ಯಾವುದನ್ನು ಕೈ ಬಿಡಬೇಕು, ಯಾವುದನ್ನು ಕಡಿತಗೊಳಿಸಬೇಕು ಎಂಬುದರ ಕುರಿತ ಚರ್ಚೆಗೆ ಮಾತ್ರ ಬಜೆಟ್‌ ಪೂರ್ವಭಾವಿ ಸಭೆ ಸೀಮಿತವಾಗಿರಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.