Thursday, 19th September 2024

ಸಿದ್ದರಾಮಯ್ಯ ವಿಧಾನಸಭೆಗೆ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ವಿಚಾರಣೆ

ಬೆಂಗಳೂರು: ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಗೆ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಲ್ಲಿ ಶುಕ್ರವಾರ ನಡೆಸಲಿದೆ.

ಐದು ಭರವಸೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷದ ಚುನಾವಣಾ ಕಾರ್ಯಕ್ರಮವು “ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 (2) ರ ಅಡಿಯಲ್ಲಿ ಲಂಚ ಮತ್ತು ಅನಗತ್ಯ ಪ್ರಭಾವಕ್ಕೆ ಸಮನಾದ ಭ್ರಷ್ಟಾಚಾರದ ಅಭ್ಯಾಸಗಳನ್ನು” ಹೊಂದಿದೆ ಎಂದು ಅರ್ಜಿಯಲ್ಲಿ ಆರೋಪಿ ಸಲಾಗಿದೆ.

ಸಿದ್ದರಾಮಯ್ಯ ಅವರು ಸಂವಿಧಾನ ಮತ್ತು ಜನ ಪ್ರಾತಿನಿಧ್ಯ ಕಾಯ್ದೆಯಲ್ಲಿ ವಿವರಿಸಿ ರುವ ನಿಯಮಗಳು ಮತ್ತು ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳ ಲಾಗಿದೆ.

ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು ಅಭ್ಯರ್ಥಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ನೀಡಿದ ಕೊಡುಗೆ ಮತ್ತು ಭರವಸೆಗಳ ಸ್ವರೂಪದಲ್ಲಿವೆ. ಪ್ರತಿವಾದಿಯ (ಸಿದ್ದರಾಮಯ್ಯ) ಒಪ್ಪಿಗೆಯೊಂದಿಗೆ ಇದನ್ನು ಮಾಡಲಾಗಿದೆ. ಅವು ವರುಣಾ ಕ್ಷೇತ್ರದ ಮತದಾರರಿಗೆ ತೃಪ್ತಿಯ ರೂಪದಲ್ಲಿವೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅಂದರೆ ಪ್ರತಿವಾದಿಗೆ ಮತ ಚಲಾಯಿಸುವಂತೆ ಮತದಾರ ರನ್ನು ನೇರವಾಗಿ ಪ್ರೇರೇಪಿಸುವ ಉದ್ದೇಶ ದಂತಿದೆ. ಇದರ ಪರಿಣಾಮ ವಾಗಿ ಪ್ರತಿವಾದಿಯ ಪರವಾಗಿ ಮತ ಚಲಾಯಿಸಲಾಗಿದೆ. ಹೀಗಾಗಿ ಸಿದ್ಧಾರಮಯ್ಯ ಅವರನ್ನು ಶಾಸಕ ಸ್ಥಾನದಿಂದ ಅನರ್ಹತೆ ಗೊಳಿಸುವಂತೆ ಅರ್ಜಿಯಲ್ಲಿ ಹೈಕೋರ್ಟ್ ನ್ಯಾಯಪೀಠ ವನ್ನು ಕೋರಲಾಗಿದೆ.

ಈ ಸಂಬಂಧ ಕ್ಷೇತ್ರದ ಖಾಸಗಿ ವ್ಯಕ್ತಿ ಕೆ.ಎಂ.ಶಂಕರ ಅವರು ನ್ಯಾ.ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಚುನಾವಣಾ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಐದು ಭರವಸೆಗಳ ಹೆಸರಿನಲ್ಲಿ ಮತಯಾಚಿಸಿದ ಪ್ರತಿ ಯೊಬ್ಬರೂ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ, ಆದರೆ ಸಿದ್ದರಾಮಯ್ಯ ಅವರನ್ನು ಮಾತ್ರ ಉದಾಹರಣೆಯಾಗಿ ಪ್ರತಿವಾದಿಯಾಗಿ ನೇಮಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Leave a Reply

Your email address will not be published. Required fields are marked *