Thursday, 19th September 2024

ಮಾಜಿ ಶಾಸಕ ವೈ.ಎಸ್‌.ವಿ.ದತ್ತಾಗೆ ತಪ್ಪಿದ ಕಡೂರು ‘ಕೈ’ ಟಿಕೆಟ್‌

ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಗೆ ಟಿಕೆಟ್‌ ಸಿಗುವ ನೀರಿಕ್ಷೆಯಲ್ಲಿದ್ದ ಮಾಜಿ ಶಾಸಕ ವೈ.ಎಸ್‌.ವಿ.ದತ್ತಾಗೆ ಕಡೂರು ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಸಿಡಿದೆದ್ದು ಬಹಿರಂಗ ಪತ್ರ ಮೂಲಕ ಅಭಿಮಾನಿ ಮನವಿ ಮಾಡಿದ್ದಾರೆ.

ವಿಧಾನ ಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವೂ​, ಆನಂದ್​ ಅವರಿಗೆ ಮಣೆ ಹಾಕಿದ್ದು ಈ ಬಾರಿಯ ಕಾಂಗ್ರೆಸ್ ಟಿಕೆಟ್​ ಕೈತಪ್ಪಿದ್ದ ರಿಂದ ಅಸಮಾಧಾನ ಗೊಂಡಿರುವ ಮಾಜಿ ಶಾಸಕ ವೈಎಸ್‌ವಿ ದತ್ತಾ ಬಹಿರಂಗ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ನನ್ನ ಹಾಗೂ ಬೆಂಬಲಿಗರ ಸ್ವಾಭಿಮಾನಕ್ಕೆ ಅವಮಾನವಾಗಿದೆ. ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲು ಭಾನುವಾರ ಬೆಳಗ್ಗೆ ಅಭಿಮಾನಿಗಳ ಸಭೆ ಕರೆಯಲಾಗಿದೆ. ಹಣವಿಲ್ಲದ ನನ್ನನ್ನು ದತ್ತಣ್ಣ ದತ್ತಣ್ಣ ಅಂತಾ ಅಭಿಮಾನದಿಂದ ಕರೆಯುವ ಮೂಲಕ ಬೆಳೆಸಿದ್ದರು. ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಬೆಂಬಲಿಗರು ಬಂದು ನಿರ್ಧಾರ ಕೈಗೊಳ್ಳಲು ಪತ್ರದ ಮೂಲಕ ಮಾಜಿ ಶಾಸಕ ವೈಎಸ್‌ವಿ ದತ್ತ ಬರೆದ ಬಹಿರಂಗ ಪತ್ರ ತಿಳಿಸಿದ್ದಾರೆ.