Saturday, 27th July 2024

ಅಭಿವೃದ್ಧಿ ವಿಷಯದಲ್ಲಿ ತಾವು ಎಂದೂ ಹಿಂದೆ ಬಿದ್ದಿಲ್ಲ: ಸಿ.ಟಿ. ರವಿ

ಚಿಕ್ಕಮಗಳೂರು: ಅಭಿವೃದ್ಧಿ ವಿಷಯದಲ್ಲಿ ತಾವು ಎಂದು ಹಿಂದೆ ಬಿದ್ದಿಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ವಿದ್ಯಾ ಕಾಫಿ ಸಂಸ್ಥೆ ನಗರ ಹೊರವಲಯದ ಹಿರೇಮಗಳೂರಿನಲ್ಲಿ ಒಂದೂವರೆ ಕೋಟಿ ರೂ ವೆಚ್ಚದಲ್ಲಿ ನೂತನ ವಾಗಿ ನಿರ್ಮಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಅವಧಿಯಲ್ಲಿ ಹಿರೇಮಗಳೂರು ಗ್ರಾಮದ ಕಲ್ಯಾಣಿಯನ್ನು ನವೀಕರಣ ಮಾಡಲಾಗಿದೆ. ಗ್ರಾಮದ ಬಹಳಷ್ಟು ದೇವಾಲಯಗಳು ಪುನರುತ್ಥಾನ ಗೊಳಿಸಲಾಗಿದೆ. ಯಾತ್ರಿ ನಿವಾಸ ಅಂಬೇಡ್ಕರ್ ಭವನ ಜಗ ಜೀವನ್ ರಾಮ್ ಭವನ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡರಾಮಚAದ್ರ ಸ್ವಾಮಿ ದೇವಾಲಯದ ಕಲ್ಲಿನ ಕಾಂಪೌ0ಡ್ ನಿರ್ಮಾಣ ಕ್ಕೆ ೫೦ ಲಕ್ಷ ರೂ ನೀಡಲಾಗಿದೆ. ಇದೀಗ ಗ್ರಾಮಸ್ಥರು ಮುತ್ತಿನಮ್ಮ ಮತ್ತು ಕೆಂಚರಾಯ ದೇವಾಲಯದ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ಆ ಕಾರ್ಯದಲ್ಲಿ ತಾವು ಸದಾ ಅವರೊಂದಿಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಎಂ ಆರ್ ಪಿ ಎಲ್ ನಿಂದ ೫೦ ಲಕ್ಷ ಸಿಎಸ್‌ಆರ್ ಅನುದಾನವನ್ನು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದ್ದು, ಆ ಹಣದಲ್ಲಿ ಸುಸಜ್ಜಿತ ಲ್ಯಾಬ್ ನಿರ್ಮಾಣ ಮಾಡಲಾಗಿದೆ. ಬೇಲೂರು ರಸ್ತೆಯ ಪದವಿಪೂರ್ಣ ಕಾಲೇಜಿಗೆ ಪ್ರಯೋಗಾಲಯ ಮತ್ತು ಕೊಠಡಿ ನಿರ್ಮಾಣಕ್ಕೆ ೨೫ ಲಕ್ಷ ರೂ ಒದಗಿಸಲಾಗಿದೆ ಎಂದರು.

ಬಿಬಿಸಿಎಲ್ ನಿಂದ ೩೨ ಲಕ್ಷ ರೂ ಅನುದಾನವನ್ನು ಹದಿ ನಾಲ್ಕು ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ಟ್ ನಿರ್ಮಾಣಕ್ಕೆ ನೀಡಲಾಗಿದೆ.

ದುಡ್ಡಿದ್ದವರು ಬಹಳ ಜನರಿದ್ದಾರೆ. ಆದರೆ ಕೊಡುವ ಮನಸ್ಥಿತಿ ಇರುವವರು ಬಹಳ ಕಡಿಮೆ. ದಾನ ಕೊಡುವ ಬುದ್ಧಿ ಉಳ್ಳವರಿಗೂ ಬರಬೇಕು. ದಾನದ ಪ್ರೇರಣೆ ಉಳಿದವರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಶಂಕುಸ್ಥಾಪನೆ ನೆರವೇರಿಸಿ ೯ ತಿಂಗಳು ಪೂರ್ಣಗೊಳ್ಳುವ ಮೊದಲೇ ಕಟ್ಟಡ ಉದ್ಘಾಟನೆ ಆಗುತ್ತಿದೆ. ವಾಷಿಂಗ್ ಮಿಷನ್‌ನಿಂದ ಹಿಡಿದು ಎಲ್ಲಾ ರೀತಿಯ ವೈದ್ಯಕೀಯ ಸಲಕರಣೆಗಳೆಲ್ಲವನ್ನೂ ವಿದ್ಯಾಹರ್ಬ್ಸ್ ಸಂಸ್ಥೆ ಪೂರೈಸಿದೆ. ಅಲ್ಲದೆ ಹಳೇ ಕಟ್ಟಡವನ್ನೂ ಅಭಿವೃದ್ಧಿ ಪಡಿಸಿ ಡಯಾಲಿಸೀಸ್ ಕೇಂದ್ರ ಬೇಕಾದರೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದರು.

ದೇವಸ್ಥಾನಕ್ಕೆ ಒಂದು ಟ್ಯೂಬ್‌ಲೈಟ್ ಕೊಟ್ಟರೆ ಬೆಳಕೇ ಕಾಣದಂತೆ ಅಷ್ಟು ದೊಡ್ಡದಾಗಿ ಹೆಸರು ಬರೆಸಿಕೊಳ್ಳುವವರನ್ನೂ ನಾವೂ ನೋಡಿದ್ದೇವೆ. ಆದರೆ ಇಲ್ಲಿ ಒಂದೂವರೆ ಕೋಟಿ ಕೊಟ್ಟು ಕಟ್ಟಡ ಕಟ್ಟಿಕೊಟ್ಟರೂ ನಾವೇನೂ ಕೊಟ್ಟಿಲ್ಲ ಎನ್ನುವ ಹಾಗೆ ನಮ್ರತೆಯ ಭಾವದಿಂದ, ಹಾಗೂ ಸಂಕೋಚದಿAದ ಅವರ ಸಹೋದರರು ಇಲ್ಲಿ ಕುಳಿತಿದ್ದಾರೆ. ಈ ರೀತಿಯ ಮನಸ್ಥಿತಿ ಬಹಳ ಕಡಿಮೆ ಜನರಿಗೆ ಇರುತ್ತದೆ ಎಂದರು.

ಇದಲ್ಲದೆ ಎಂಆರ್‌ಪಿಎಲ್‌ನಿ0ದ ಮಲ್ಲೇಗೌಡ ಆಸ್ಪತ್ರೆಯಲ್ಲಿ ಲ್ಯಾಬ್ ನಿರ್ಮಾಣ ಮಾಡಲು ೫೦ ಲಕ್ಷ ರೂ.ಅನುದಾನ ಕೊಡಿಸಿದ್ದೇವೆ. ಸುಸಜ್ಜಿತ ಲ್ಯಾಬ್ ನಿರ್ಮಾಣವಾಗಿದೆ. ಬೇಲೂರು ರಸ್ತೆ ಪದವೀ ಪೂರ್ವ ಕಾಲೇಜಿಗೆ ೭೫ ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ಮತ್ತು ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ಅನುದಾನ ಕೊಡಿಸಿದ್ದೇವೆ ಎಂದರು.

ಬಿಬಿಸಿಎಲ್ ನಿಂದ ೩೨ ಲಕ್ಷ ವೆಚ್ಚದಲ್ಲಿ ೧೪ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಲೈಫ್ ಲೈನ್ ಸಂಸ್ಥೆ ಯವರು ಮತ್ತು ದಾನಿ ರೊನಾಲ್ಡ್ ಕುಲಾಸೋ ಅವರು ತಲಾ ೩೦ ಲಕ್ಷ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜಿಗೆ ಒಂದೊAದು ಬಸ್ ಕೊಡುಗೆಯಾಗಿ ನೀಡಿದ್ದಾರೆ. ಇವೆಲ್ಲಾ ಸಣ್ಣ ಪ್ರಯತ್ನದಿಂದಾಗಿದೆ ಎಂದರು.

-ಸಮಾಜ ಯಾವಾಗಲೂ ಕೃತಜ್ಞತಾ ಪೂರ್ವಕವಾಗಿರಬೇಕು. ಅದನ್ನು ಮರೆತು ಕೃತಜ್ನ ಆದರೆ ಆಗ ಸಮಾಜದ ವ್ಯವಸ್ಥೆ ಅಧೋಗತಿಗೆ ಹೋಗಿದೆ ಎಂದರ್ಥ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತಮ್ಮ ಸಲಹೆ ಮತ್ತು ಮನವಿಗೆ ಸ್ಪಂದಿಸಿ ಹಿರೇಮಗಳೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಿದ ದಾನಿ ವಿದ್ಯಾ ಕಾಫಿ ಸಂಸ್ಥೆಯ ಶ್ಯಾಮ್ ಪ್ರಸಾದ್ ಮತ್ತು ಸಹೋದರರಿಗೆ ಧನ್ಯವಾದ ಅರ್ಪಿಸಿದರು.

ವಿದ್ಯಾ ಹರ್ಬ್ಸ್ ಪ್ರೆöÊವೇಟ್ ಲಿ.ನ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪ ನಿರ್ದೇಶಕ ಕೆ.ಶ್ಯಾಂಪ್ರಸಾದ್, ಹಾಗೂ ಸಂಸ್ಥೆಯ ಶಿವಶಂಕರ್ ಶರ್ಮ, ವೆಂಕಟೇಶ್, ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ನಗರಸಭೆ ಸದಸ್ಯೆ ವಿದ್ಯಾ ಬಸವರಾಜ್, ನಗರಸಭೆ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್, ಡಾ.ಸಲ್ಡಾನ ವೈದ್ಯರುಗಳು ಹಾಜರಿದ್ದರು.

error: Content is protected !!