ಚಿಕ್ಕಬಳ್ಳಾಪುರ: ಕರ್ನಾಟಕದ ಬೆಂಗಳೂರಿನ ಭಗವಾನ್ ಟಿವಿ ಅಧ್ಯಕ್ಷರಾದ ಜಿ.ಎಸ್.ಗಣೇಶ್ ಅವರನ್ನು ಡೆಮಾಕ್ರಟಿಕ್ ಜರ್ನಲಿಸ್ಟ್ ಫೆಡರೇಶನ್ನ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ರಾಷ್ಟ್ರೀಯ ಅಧ್ಯಕ್ಷರಾದ ಮಸಾಣಿ ಕೃಷ್ಣಾರೆಡ್ಡಿ ಅವರು ನೇಮಿಸಿ ಆದೇಶ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಡಿಜೆಎಫ್ ಯೂನಿಯನ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆಯಾದ ಜಿ.ಎಸ್.ಗಣೇಶ್ ಮಾತನಾಡಿ ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಕೂಡ ಪತ್ರಕರ್ತರ ಸೇವಾ ಹಿರಿತನ ಪರಿಗಣಿಸಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಬೇಕು ಎಂದು ಸಂಬಂಧ ಪಟ್ಟವರಿಗೆ ಮನವಿ ಮಾಡಲಾಗುವುದು. ನನ್ನ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ವರದಿಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇವರ ಆಯ್ಕೆಯನ್ನು ರಾಜ್ಯ ಭಗವಾನ್ ಟಿವಿ ಬಳಗ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದೆ.