Thursday, 19th September 2024

ಗಂಗಾವತಿಯಲ್ಲೂ ಲೋಕಾಯುಕ್ತ ದಾಳಿ

ಗಂಗಾವತಿ: ರಾಜ್ಯಾದ್ಯಂತ ಏಕ ಕಾಲಕ್ಕೆ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದ್ದು, ಕೊಪ್ಪಳದ ಗಂಗಾವತಿಯಲ್ಲಿಯೂ ದಾಳಿ ನಡೆದಿದೆ.

ಬಳ್ಳಾರಿ ಜಿಲ್ಲೆ ಕಂಪ್ಲಿ ಪುರಸಭೆ ಪರಿಸರ ಅಭಿಯಂತರ ಶರಣಪ್ಪ ಅವರ ಗಂಗಾವತಿ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಅಕ್ರಮ‌ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ದಾಳಿ ನಡೆದಿದೆ.

ಗಂಗಾವತಿ ನಗರದ ಶಿಕ್ಷಕರ ಕಾಲನಿಯಲ್ಲಿನ ನಿವಾಸಕ್ಕೆ ಬೆಳಬೆಳಗ್ಗೆ ಲಗ್ಗೆ ಇಟ್ಟಿರೋ, ಲೋಕಾ ಪೊಲೀಸರು ಸದ್ಯ ಮನೆಯಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಸಲಿಂ ಪಾಷ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸು ತ್ತಿದ್ದಾರೆ.