Thursday, 19th September 2024

ಹಳೇ ಪಿಂಚಣಿ ಇರಲಿ ಎನ್‌ಪಿಎಸ್ ರದ್ದಾಗಲಿ

ಚಿಕ್ಕಬಳ್ಳಾಪುರ: ತಾಲೂಕಿನ ಎನ್‌ಪಿಎಸ್ ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ಹಳೆ ಪಿಂಚಣ ಯೋಜನೆಗೆ ಒತ್ತಾಯಿಸಿ ಮಾಡು ಇಲ್ಲವೇ ಮಡಿ ಎಂಬ ಹೋರಾಟಕ್ಕೆ ಬೆಂಬಲಿಸಿದ್ದಾರೆ.

ತಾಲೂಕಿನ ವಿವಿಧ ಇಲಾಖೆಯಿಂದ ಸುಮಾರು ೧೦೦೦ ಕ್ಕೂ ಹೆಚ್ಚು ಸರ್ಕಾರಿ ನೌಕರರು ಸೋಮವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.೨೦೦೬ ರ ನಂತರ ಆಯ್ಕೆಯಾದ ಸರ್ಕಾರಿ ನೌಕರರ ಕುಟುಂಬ ಭದ್ರತೆಗಾಗಿ ಹಳೆ ಪಿಂಚಣಿ ಯೋಜನೆ ಜಾರಿಗೆ  ಆಗ್ರಹಿಸಿ ೬ ಸರ್ಕಾರಿ ಬಸ್ಸಿನಲ್ಲಿ ಬೆಂಗಳೂರು ಹೋರಾಟಕ್ಕೆ ಪ್ರಯಾಣ  ಬೆಳೆಸಿದರು.

ಈ ಸಂದರ್ಭಕ್ಕೆ ಜಿಲ್ಲಾ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಸ್ವಾಮಿ,  ತಾಲೂಕು ಅಧ್ಯಕ್ಷ  ನಾಗರಾಜ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್, ಮಾಧ್ಯಮ ಸಲಹೆಗಾರ ಮಂಜುನಾಥ ಎನ್,  ಎನ್ ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿಷ್ಣುವರ್ಧನ್, ಕಾರ್ಯದರ್ಶಿ ಅಮರ್, ಖಜಾಂಜಿ ಶಿವ ಕುಮಾರ್, ಆರೋಗ್ಯ ಇಲಾಖೆಯ ಭಾನು ಪ್ರಕಾಶ್, ಅರುಣ್ ಮತ್ತಿತ ರರು ಹಾಜರಿದ್ದರು.