ಚಿಕ್ಕಬಳ್ಳಾಪುರ: ಮೌಲ್ಯಾಧಾರಿತ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುವ ಮೂಲಕ ಆದರ್ಶಪ್ರಾಯ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಪ್ರತಿಷ್ಠಿತ ಶಿಕ್ಷಣ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಮನ್ನಣೆ ಮತ್ತು ಶ್ಲಾಘನೆಯನ್ನು ಗಳಿಸುವುದರ ಮೂಲಕ ೨೦೨೨ ರ ಸಾಲಿನ ಸಾ ಬೇ ರಾ – ಸಾಮಾಜಿಕ ಹೊಣೆಗಾರಿಕೆ ಮತ್ತು ವ್ಯಾಪಾರೋದ್ಯಮ ನಿರ್ವಹಣೆಗಾಗಿನ ಪುರಸ್ಕಾರ ಮತ್ತು ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿದೆ.
ನೂರಾರು ನಾಮನಿರ್ದೇಶನಗಳ ಮೂಲಕ ಆಯ್ಕೆಯಾದ, ಸದ್ಗುರು ಶ್ರೀ ಮಧುಸೂದನ್ ಸಾಯಿ ನೇತೃತ್ವದ ಪ್ರಶಾಂತಿ ಬಾಲಮಂದಿರ ಟ್ರಸ್ಟ್, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಪೌಷ್ಟಿಕಾಂಶ ಮತ್ತು ಉದ್ಯಮ ಕ್ಷೇತ್ರದಲ್ಲಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿ ಕೊಂಡಿದೆ.
ಎರಡು ಹಂತದ ಪ್ರಕ್ರಿಯೆಯ ಮೂಲಕ ಪ್ರಖ್ಯಾತ ತೀರ್ಪುಗಾರರ ಮೇಲ್ವಿಚಾರಣೆಯ ಮೂಲಕ ಎಚ್ ಡಿ ಎಫ್ ಸಿ ಬ್ಯಾಂಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ರೇಣು ಸೂದ್ ಅವರ ಮೇಲುಸ್ತುವಾರಿಕೆಯಲ್ಲಿ ಈ ಪುರಸ್ಕಾರವು ಪೋಷಿಸ ಲ್ಪಟ್ಟಿದ್ದು, ನವದೆಹಲಿಯ ಯುನೆಸ್ಕೋ ಹೌಸ್ನಲ್ಲಿ ೨೦೨೨ರ ಡಿಸೆಂಬರ್ ೭ರಂದು ಈ ಪುರಸ್ಕಾರ ವನ್ನು ಪ್ರದಾನ ಮಾಡಿದೆ ಎಂದು ಪ್ರಶಾಂತಿ ಬಾಲ ಮಂದಿರ,ಚಿಕ್ಕಬಳ್ಳಾಪುರ ಟ್ರಸ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.