Saturday, 26th October 2024

ನಾಲ್ಕು ಕಸಾಯಿಖಾನೆ ಅಂಗಡಿ ಮೇಲೆ ದಾಳಿ

ಕೊರಟಗೆರೆ: ನಾಲ್ಕು ಕಸಾಯಿಖಾನೆ ಅಂಗಡಿ ಮೇಲೆ ಕೊರಟಗೆರೆ ಪೊಲೀಸರ ತಂಡ ದಾಳಿ ಮಾಡಿ ೪ ಜನ ಆರೋಪಿಗಳ ಬಂಧಿಸಿರುವ ಘಟನೆ ನಡೆದಿದೆ.

ಕೊರಟಗೆರೆ ಪಟ್ಟಣದಲ್ಲಿ ಬೆಳಿಗ್ಗೆ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಅವರ ಪೊಲೀಸರ ತಂಡದಿ೦ದ ೪ ಕಸಾಯಿಖಾನೆ ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಗೌಗ್ಯಾನ್ ಫೌಂಡೇಶನ್ ಸ್ವಯಂ ಸೇವಕರ ತಂಡ ದೂರಿನ ಮೇರೆಗೆ ಪೊಲೀಸರ ತಂಡ ದಾಳಿ ಮಾಡಿ ೪ ಜನ ಆರೋಪಿಗಳನ್ನ ಬಂದಿಸಿದ್ದಾರೆ. ದಾಳಿಯ ವೇಳೆ ೬ ಸೀಮೆ ಕರುಗಳನ್ನ ರಕ್ಷಣೆ ಮಾಡಿದ್ದಾರೆ.

ಸುಮಾರು ೫೦೦ ಕೆ.ಜಿ.ಯಷ್ಟು ದನದ ಮಾಂಸವನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ದಾಳಿಯಲ್ಲಿ ಸಿಪಿಐ ಸಿದ್ದರಾಮೇಶ್ವರ ಪಿಎಸ್‌ಐ ಮಂಜುಳ ಸೇರಿದಂತೆ ೨೦ಕ್ಕೂ ಹೆಚ್ಚು ಪೊಲೀಸರು ಹಾಗೂ ಸ್ವಯಂ ಸೇವಕರು ಹಾಜರಿದ್ದರು.