Sunday, 8th September 2024

ತೊರೆನೂರು ಗ್ರಾಮದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ

ಮಡಿಕೇರಿ: ತೊರೆನೂರು ಗ್ರಾಮದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಪ್ರಭಾಕರ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿ, ಇಂದು ನಾವೆಲ್ಲರೂ ಸಂಭ್ರಮ ಪಡಬೇಕಾದ ದಿನ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೇಳು ವರ್ಷಗಳೇ ಕಳೆದಿವೆ. ದೇಶದ ನಾಗರೀಕರ ನೋವು ನಲಿವಿಗೆ ಸ್ಪಂದಿಸುತ್ತ ದೇಶದ ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಹೇಳಿದರು.

ಗಿರೀಶ್, ಸತೀಶ್, ಮೂರ್ತಿ, ಬೆಳ್ಳಿಯಪ್ಪ, ಶೇಖ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!