Sunday, 8th September 2024

ಚುನಾವಣಾ ಸಂಚಾರಿ ಜಾಗೃತ ದಳ ತಂಡ ೫ :ಮೂರು ಲಕ್ಷ ಬೆಲೆ ಬಾಳುವ ಬಟ್ಟೆ ವಶ

ತಿಪಟೂರು: ವಿಧಾನ ಸಭಾ ಚುನಾವಣೆಗೆ ಸಂಬ0ಧಿಸಿ ಮತದಾರರಿಗೆ ನೀಡಲು ಕೊಂಡ್ಯೋಯ್ಯುತ್ತಿದ್ದ ಬೆಲೆಬಾಳುವ ವಿವಿಧ ಮಾದರಿಯ ಬಟ್ಟೆಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ೫ನೇ ತಂಡದ ಮುಖ್ಯಸ್ಥ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಎಇಇ ಹೆಚ್.ಎನ್. ಹೊನ್ನೇಶಪ್ಪ ವಶ ಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ರಜತಾದ್ರಿಪುರದ ಟೋಲ್ ಬಳಿ ಅನುಮಾನ ಬಂದು ಕೆ.ಎ.೦೪ ಎಮ್.ಜಿ ೨೩೩೭ ಓಮಿನಿ ವಾಹನ ತಪಾಸಣೆ ನೆಡೆಸಿದಾಗ ಮೂರು ಲಕ್ಷದ ಬೆಲೆ ಬಾಳುವ ವಿವಿಧ ಮಾದರಿಯ ೧೯೧ ತುಣುಕಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳಾದ ಚಾಲಕ ಅನ್ವರ್ ಭಾಷಾ, ಇನ್ನಿಬ್ಬರಾದ ಲೋಕೇಶ ಕುಮಾರ್, ಫಯಾಜ್ ದಾದಾಫೀರ್ ಅವರನ್ನು ವಾಹನ ಸಮೇತ ವಶಕ್ಕೆ ಪಡಿದುಕೊಂಡು ಕಿಬ್ಬನಹಳ್ಳಿ ಪೋಲೀಸ್ ಠಾಣೆಗೆ ಹಾಜರು ಪಡಿಸಿ ಆರೋಪಿಗಳ ವಿರುದ್ದು ಕಲಂ ೯೮ ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

error: Content is protected !!