ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ಶ್ರತುಗಳು ದೊಡ್ಡ ತಪ್ಪು ಮಾಡಿದ್ದಾರೆ, ತಕ್ಕ ಶಿಕ್ಷೆಯನ್ನು ನೀಡುತ್ತೇವೆ; ಇರಾನ್ ನಾಯಕ ಖಮೇನಿ

ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನಕ್ಕೆ ಅಮೆರಿಕ ಎಂಟ್ರಿ ಕೊಟ್ಟಾಗಿನಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪರಮಾಣು ಘಟಕಗಳ ಮೇಲೆ ನಡೆಸಿದ ದಾಳಿಯನ್ನು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ತೀವ್ರವಾಗಿ ಖಂಡಿಸಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕಕ್ಕೆ ಕಠಿಣ ಮತ್ತು ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ

ಅಮೆರಿಕದ ತಪ್ಪಿಗೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ; ಖಮೇನಿ

Profile Vishakha Bhat Jun 23, 2025 9:50 AM

ಟೆಹ್ರಾನ್‌: ಇಸ್ರೇಲ್‌ ಹಾಗೂ ಇರಾನ್‌ (Israel-Iran Conflict) ನಡುವಿನ ಕದನಕ್ಕೆ ಅಮೆರಿಕ ಎಂಟ್ರಿ ಕೊಟ್ಟಾಗಿನಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಪರಮಾಣು ಘಟಕಗಳ ಮೇಲೆ ನಡೆಸಿದ ದಾಳಿಯನ್ನು ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ತೀವ್ರವಾಗಿ ಖಂಡಿಸಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕಕ್ಕೆ ಕಠಿಣ ಮತ್ತು ಸೂಕ್ತ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶತ್ರುಗಳು ದೊಡ್ಡ ಅಪರಾಧ ಮಾಡಿದ್ದಾರೆ. ಆ ತಪ್ಪಿಗೆ ಶಿಕ್ಷೆ ಹೇಗೆ ನೀಡಬೇಕು ಎಂಬುದು ಇರಾನ್‌ಗೆ ಚೆನ್ನಾಗಿ ತಿಳಿದಿದೆ ಎಂದು ಖಮೇನಿ ಹೇಳಿದ್ದಾರೆ. ಭಾನುವಾರ ಇಸ್ರೇಲ್‌ ಸೇನೆಯು ಕ್ಷಿಪಣಿ ಉಡಾವಣಾ ಮತ್ತು ಸಂಗ್ರಹಣಾ ತಾಣಗಳು ಸೇರಿದಂತೆ ಇರಾನಿನ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿದ ನಂತರ ಅವರ ಹೇಳಿಕೆಗಳು ಬಂದವು.

ಅಮೆರಿಕ ದಾಳಿಯ ಬೆನ್ನಲ್ಲೇ ಇರಾನ್‌ ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್‌ ರೈಸಿಂಗ್‌ ಲಯನ್‌ ಹೆಸರಿನಲ್ಲಿ ಇಸ್ರೇಲ್‌ ದೇಶವು ಇರಾನ್‌ ಮೇಲೆ ದಾಳಿ ನಡೆಸಿದ ಬಳಿಕ ಯುದ್ಧ ಆರಂಭವಾಯಿತು. ಇರಾನ್‌ ಕೂಡಾ ಬಳಿಕ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದೀಗ ಯುದ್ಧಕ್ಕೆ ಅಮೆರಿಕ ಕೂಡಾ ಎಂಟ್ರಿಯಾಗಿದೆ. ಇರಾನ್‌ ನ ಮೂರು ಪರಮಾಣು ನೆಲೆಗಳ ಮೇಲೆ ಶನಿವಾರ ತಡರಾತ್ರಿ ಅಮೆರಿಕ ದಾಳಿ ನಡೆಸಿದೆ. ಫಾರ್ಡೋ, ನತಾಂಜ್‌, ಇಸ್ಫಹಾನ್‌ ಮೇಲೆ ಅಮೆರಿಕ ದಾಳಿ ನಡೆಸಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಇದೀಗ ನೇರವಾಗಿ ಭಾಗಿಯಾಗಿದ್ದು ಇರಾನ್ ನಲ್ಲಿನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಅಮೆರಿಕ ದಾಳಿ ಬೆನ್ನಲ್ಲೇ ಕೆರಳಿರುವ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಈ ಸುದ್ದಿಯನ್ನೂ ಓದಿ: Israel-Iran Conflict: ಇಸ್ರೇಲ್‌ -ಇರಾನ್‌ ಯುದ್ಧಕ್ಕೆ ಎಂಟ್ರಿ ಕೊಟ್ಟೇ ಬಿಡ್ತು ಅಮೆರಿಕ; ಇರಾನ್‌ನ 3 ಪರಮಾಣು ನೆಲೆಗಳ ಮೇಲೆ ದಾಳಿ

ಖಮೇನಿ ಎಲ್ಲಿದ್ದಾರೆ?

ಇಸ್ರೇಲ್‌ ದಾಳಿ ಪ್ರಾರಂಭವಾದ ಬಳಿಕ ಹತ್ಯೆಯ ಭೀತಿಯಿಂದ ಇರಾನಿನ ಸರ್ವೋಚ್ಚ ನಾಯಕ ಪ್ರಸ್ತುತ ಭೂಗತ ಬಂಕರ್‌ನಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಹೆಚ್ಚಾಗಿ ತಮ್ಮ ಕಮಾಂಡರ್‌ಗಳೊಂದಿಗೆ ವಿಶ್ವಾಸಾರ್ಹ ಸಹಾಯಕರ ಮೂಲಕ ಮಾತನಾಡುತ್ತಾರೆ ಮತ್ತು ಎಲೆಕ್ಟ್ರಾನಿಕ್ ಸಂವಹನಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ತಾನು ಕೊಲ್ಲಲ್ಪಟ್ಟರೆ ತನ್ನ ಉತ್ತರಾಧಿಕಾರಿಯಾಗಲು ಮೂವರು ಹಿರಿಯ ಧರ್ಮಗುರುಗಳನ್ನು ಅಭ್ಯರ್ಥಿಗಳಾಗಿ ಹೆಸರಿಸಿದ್ದಾರೆ.