Nadaprabhu Kempegowda: ಕೆಂಪೇಗೌಡರ ಕೀರ್ತಿಯನ್ನು ಮೀರಿ ಮೋದಿಯ 11 ವರ್ಷದ ಆಡಳಿತವಿದೆ: ಸೀಕಲ್ ರಾಮಚಂದ್ರಗೌಡ ಅಭಿಮತ
ಇದೇ ಮೊದಲ ಬಾರಿಗೆ ಬಿಜೆಪಿ ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ. ದೂರಾ ಲೋಚನೆಯಲ್ಲಿ ಕಟ್ಟಿದ ಬೆಂಗಳೂರು ವಿಶ್ವದಲ್ಲಿ ಹೆಸರಾಗಿದೆ. ಜಯಂತಿ ಆಚರಣೆ ಮೂಲಕ ಮುಂದಿನ ಪೀಳಿಗೆಗೆ ನಾವು ಅವರ ಸಂದೇಶವನ್ನು ನೀಡಬೇಕು. ಬಿಜೆಪಿ ನಾಯಕರಿಗೆ ಜವಾಬ್ದಾರಿ ಇರಬೇಕು. 11 ವರ್ಷಗಳಲ್ಲಿ ಮೋದಿಜೀ ದೇಶಕ್ಕೆ ನೀಡಿರುವ ಕೊಡುಗೆ ಕೆಂಪೇಗೌಡರ ಇತಿಹಾಸ ವನ್ನು ಮೀರಿದೆ.

ಕೆಂಪೇಗೌಡರ ಕೀರ್ತಿಯನ್ನು ಮೀರಿ ಮೋದಿಯ ೧೧ವರ್ಷದ ಆಡಳಿತವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.

ಚಿಕ್ಕಬಳ್ಳಾಪುರ : 500 ವರ್ಷಗಳ ಹಿಂದೆಯೇ ವೈಜ್ಞಾನಿಕವಾದ ರೀತಿಯಲ್ಲಿ ಬೆಂಗಳೂರು ನಿರ್ಮಾಣ ಮಾಡಿ ಅಲ್ಲಿ ಕುಲೆಂಟು ಜಾತಿಗಳ ಬದುಕಿಗೆ ಅವಕಾಶ ನೀಡಿ ವಾಣಿಜ್ಯನಗರವನ್ನಾಗಿ ಮಾಡಿದ್ದರು. ಇವರ ಆಡಳಿತವನ್ನು ಮೀರಿಸುವ ಹಾಗೆ ಪ್ರಧಾನಿ ಮೋದಿ ಅವರ 11 ವರ್ಷದ ಆಡಳಿತವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಿ ಅವರು ಮಾತನಾಡಿದರು.
ಇದೇ ಮೊದಲ ಬಾರಿಗೆ ಬಿಜೆಪಿ ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಆಚರಿಸುತ್ತಿದ್ದೇವೆ. ದೂರಾ ಲೋಚನೆಯಲ್ಲಿ ಕಟ್ಟಿದ ಬೆಂಗಳೂರು ವಿಶ್ವದಲ್ಲಿ ಹೆಸರಾಗಿದೆ. ಜಯಂತಿ ಆಚರಣೆ ಮೂಲಕ ಮುಂದಿನ ಪೀಳಿಗೆಗೆ ನಾವು ಅವರ ಸಂದೇಶವನ್ನು ನೀಡಬೇಕು. ಬಿಜೆಪಿ ನಾಯಕರಿಗೆ ಜವಾಬ್ದಾರಿ ಇರಬೇಕು. 11 ವರ್ಷಗಳಲ್ಲಿ ಮೋದಿಜೀ ದೇಶಕ್ಕೆ ನೀಡಿರುವ ಕೊಡುಗೆ ಕೆಂಪೇಗೌಡರ ಇತಿಹಾಸ ವನ್ನು ಮೀರಿದೆ. ಈ ವಿಚಾರಗಳನ್ನು ಜಿಲ್ಲೆಯಲ್ಲಿ ಮನೆಮನೆಗೂ ಮುಟ್ಟಿಸುವ ಕೆಲಸವನ್ನು ನಾವು ನೀವೆಲ್ಲ ಮಾಡಬೇಕಿದೆ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್. ಮುರಳಿಧರ್ ಮತ್ತು ಕೆ.ಬಿ. ಮುರಳಿ, ಜಿಲ್ಲಾ ಕಾರ್ಯದರ್ಶಿ ಆರ್. ಎನ್ ಅಶೋಕ್ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಲಕ್ಷ್ಮಿಪತಿ, ಶಿಡ್ಲಘಟ್ಟ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಆನಂದ ಗೌಡ, ದೇವಸ್ಥಾನ ಹೊಸಹಳ್ಳಿ ರಾಮಣ್ಣ, ಸುರೇಂದ್ರ ಗೌಡ, ಮಹಿಳಾ ಮುಖಂಡರಾದ ಪ್ರೇಮ ಲೀಲಾ, ಸುಮಿತ್ರ ಮಲ್ಲಿಕಾ ಕಲಾ ನಾಗರಾಜ್ ಸುಜಾತ ಬಾಬು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಾಲು, ಜಿಲ್ಲಾ ಮಾಧ್ಯಮ ಸಂಚಾಲಕ ವಿ. ಮಧುಚಂದ್ರ, ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ದ್ದರು.