Corrupted Officer: ಸರ್ಕಾರಿ ನೌಕರನ ಮನೆಯಲ್ಲಿ ಸಿಕ್ತು ಕಂತೆ ಕಂತೆ ಹಣ; ದಾಳಿ ನಡೆಯುತ್ತಿದ್ದಂತೆ ಕಿಟಕಿಯಿಂದ ನೋಟು ಎಸೆದ ಭ್ರಷ್ಟ ಅಧಿಕಾರಿ
ಇತ್ತೀಚೆಗೆ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು. ಆ ಪ್ರಕರಣ ದೇಶದಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಡಿಶಾದ ಸರ್ಕಾರಿ ನೌಕರರ ಒಬ್ಬರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.


ಭುವನೇಶ್ವರ್: ಇತ್ತೀಚೆಗೆ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ (Corrupted Officer) ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದವು. ಆ ಪ್ರಕರಣ ದೇಶದಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಡಿಶಾದ ಸರ್ಕಾರಿ ನೌಕರರ ಒಬ್ಬರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಸಿಕ್ಕಿ ಬೀಳುವ ಭಯದಲ್ಲಿ ಆ ನೌಕರ ಮನೆಯ ಕಿಟಕಿಯಿಂದ 500 ರೂಪಾಯಿ ನೋಟಿನ ಕಂತೆಗಳನ್ನು ಹೊರಗೆ ಎಸೆದಿದ್ದಾನೆ. ಸಿಕ್ಕಿಬಿದ್ದಿರುವ ಆರೋಪಿ ಭೈಕುಂಠ ನಾಥ್ ಸಾರಂಗಿ. ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾನೆ.
ವಿಚಾರಣೆ ವೇಳೆ ನೌಕರ ಸಾರಂಗಿ ಮನೆಯಲ್ಲಿಯೇ ಒಟ್ಟು 2.1 ಕೋಟಿ ರೂ. ನಗದು ಪತ್ತೆಯಾಗಿದೆ. ಅಂಗುಲ್, ಭುವನೇಶ್ವರ ಮತ್ತು ಪುರಿಯ ಏಳು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಅಂಗುಲ್ನಲ್ಲಿದ್ದ ಮನೆಯಲ್ಲಿ 1.1 ಕೋಟಿ ರೂ ಪತ್ತೆಯಾಗಿದೆ. ಭುವನೇಶ್ವರದ ಫ್ಲ್ಯಾಟ್ನಲ್ಲಿ ಮತ್ತೊಂದು 1 ಕೋಟಿ ರೂ ಸಿಕ್ಕಿದೆ ಎಂದು ತಿಳಿದು ಬಂದಿದೆ. ಸದ್ಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
Today , on the allegation of possession of disp. assets by Sri Baikuntha Nath Sarangi, Chief Engineer, RW Division, Odisha, house searches are on by #Odisha #Vigilance at 7 locations. Approx Rs 2.1 Crore cash recovered so far from his house at Bhubaneswar (1 Cr) & Angul (1.1 Cr). pic.twitter.com/j0H344OiqA
— Odisha Vigilance (@OdishaVigilance) May 30, 2025
ಅಧಿಕಾರಿ ಮನೆ ಮೇಲೆ ದಾಳಿ ಮಾಡುತ್ತಿದ್ದಂತೆ ಅಧಿಕಾರಿ ಕಂತೆ ಕಂತೆ ನೋಟುಗಳನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾನೆ. ಕೂಡಲೇ ಎಚ್ಚೆತ್ತ ಅವರು ಸಾಕ್ಷಿಗಳ ಸಮ್ಮುಖದಲ್ಲಿ ಕಿಟಕಿಯಿಂದ ಎಸೆದ ಆ ಕಂತೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಶೋಧ ಕಾರ್ಯಾಚರಣೆಯ ವಿಡಿಯೋಗಳು ವೈರಲ್ ಆಗಿದ್ದು, ಅಧಿಕಾರಿಗಳು ಹಣದ ರಾಶಿಗಳನ್ನು ಎಣಿಸುತ್ತಿರುವುದು ಅದರಲ್ಲಿ ಕಾಣಬಹುದು. ವಶ ಪಡಿಸಿಕೊಂಡ ನಗದಲ್ಲಿ 500 ರೂಪಾಯಿ, 200, 100 ಮತ್ತು 50 ರೂಪಾಯಿ ನೋಟುಗಳು ಇದ್ದವು ಎಂದು ತಿಳಿದು ಬಂದಿದೆ. 26 ಪೊಲೀಸ್ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿತು. ಅದರಲ್ಲಿ ಎಂಟು ಡಿಎಸ್ಪಿ, 12 ಇನ್ಸ್ಪೆಕ್ಟರ್ ಮತ್ತು ಆರು ಎಎಸ್ಐಗಳು ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Madhabi Puri: ಭ್ರಷ್ಟಾಚಾರ ಆರೋಪ: ಸೆಬಿ ಮಾಜಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ಗೆ ಲೋಕಪಾಲ್ ಕ್ಲೀನ್ ಚಿಟ್
ಅವರ ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಹೊರಿಸಲಾಗಿತ್ತು. ಅಂಗುಲ್ನ ವಿಜಿಲೆನ್ಸ್ನ ವಿಶೇಷ ನ್ಯಾಯಾಧೀಶರು ಶೋಧ ವಾರಂಟ್ಗಳನ್ನು ಹೊರಡಿಸಿದ್ದರಿಂದ ಏಕಕಾಲದಲ್ಲಿ ದಾಳಿ ನಡೆಸಲಾಗುತ್ತಿದೆ. ವಿಜಿಲೆನ್ಸ್ ತಂಡವು ಅಂಗುಲ್ನ ಕರಡಗಾಡಿಯಾದಲ್ಲಿ ಎರಡು ಅಂತಸ್ತಿನ ವಸತಿ ಮನೆ ಮತ್ತು ಪುರಿ ಜಿಲ್ಲೆಯ ಭುವನೇಶ್ವರ ಮತ್ತು ಪಿಪಿಲಿಯ ಸಿಯುಲಾದಲ್ಲಿ ಫ್ಲಾಟ್ಗಳನ್ನು ಪತ್ತೆಹಚ್ಚಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.