Sunday, 8th September 2024

ದಲಿತ ಸಹೋದರಿಯರ ಅತ್ಯಾಚಾರ ಪ್ರಕರಣ: ಆರು ಜನರ ಬಂಧನ

ಲಖನೌ: ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಇಬ್ಬರು ದಲಿತ ಸಹೋದರಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಬಾಲಕಿಯರು ತಮ್ಮ ನಾಲ್ವರು ಸಹಚರರೊಂದಿಗೆ ಸೇರಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಮದುವೆ ಯಾಗುವಂತೆ ಒತ್ತಡ ಹೇರುತ್ತಿದ್ದರು. ಲಖಿಂಪುರದ ಪೊಲೀಸ್ ಅಧೀಕ್ಷಕ ಸಂಜೀವ್ ಸುಮನ್ ಮಾತನಾಡಿ, ಎಲ್ಲಾ ಆರೋಪಿಗಳು ಮತ್ತು ಬಲಿಪಶುಗಳು ಲಾಲ್ ಪುರ್ವಾ ಗ್ರಾಮಕ್ಕೆ ಸೇರಿದವರು ಎಂದು ಹೇಳಿದರು. ನಾಲ್ವರು ಆರೋಪಿಗಳು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದರೆ, ಉಳಿದ ಇಬ್ಬರು ಅವರಿಗೆ ಸಹಾಯ ಮಾಡಿದರು.

ಆರೋಪಿಗಳನ್ನು ಚೇತ್ರಂ ಗೌತಮ್, ಜುನೈದ್, ಸುಹೈಲ್, ಕರೀಮುದ್ದೀನ್, ಆರಿಫ್ ಮತ್ತು ಹಫೀಜ್-ಯುವ-ರೆಹಮಾನ್ ಎಂದು ಗುರುತಿಸಲಾಗಿದೆ.

error: Content is protected !!