ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS:ʻಪಂಜಾಬ್‌ ಕಿಂಗ್ಸ್‌ ಫ್ಲಾಪ್‌ ಶೋʼ-ಸಪ್ಪೆ ಮುಖ ಹಾಕಿಕೊಂಡ ಪ್ರೀತಿ ಝಿಂಟಾ!

‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ 2025ರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಬ್ಯಾಟಿಂಗ್‌ ಕುಸಿತ ಅನುಭವಿಸಿತು. ಆ ಮೂಲಕ ಕೇವಲ 101 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆರ್‌ಸಿಬಿ ಬೌಲರ್‌ಗಳ ರಣತಂತ್ರಕ್ಕೆ ನಾಯಕ ಶ್ರೇಯಸ್‌ ಅಯ್ಯರ್‌ ಸೇರಿದಂತೆ ಸ್ಟಾರ್‌ ಬ್ಯಾಟ್ಸ್‌ಮನ್‌ಗಳು ಎಡವಿದರು. ಈ ವೇಳೆ ಗ್ಯಾಲರಿಯಲ್ಲಿದ್ದ ಪಂಜಾಬ್‌ ಕಿಂಗ್ಸ್‌ ಓನರ್‌ ಪ್ರೀತಿ ಝಿಂಟಾ ಅವರ ಸಪ್ಪೆ ಮುಖ ಹಾಕಿಕೊಂಡಿದ್ದರು. ಈ ಫೋಟೋ ಹಾಗೂ ವಿಡಿಯೋ ವೈರಲ್‌ ಆಗಿದೆ.

ʻಪಂಜಾಬ್‌ ಫ್ಲಾಪ್‌ ಶೋʼ-ಸಪ್ಪೆ ಮುಖ ಹಾಕಿಕೊಂಡ ಪ್ರೀತಿ ಝಿಂಟಾ!

ಪಂಜಾಬ್‌ ಬ್ಯಾಟಿಂಗ್‌ ವೈಫಲ್ಯಕ್ಕೆ ಪ್ರೀತಿ ಝಿಂಟಾ ಬೇಸರ.

Profile Ramesh Kote May 29, 2025 10:04 PM

ಚಂಡೀಗಢ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ನಡುವಣ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೊದಲನೇ ಕ್ವಾಲಿಫೈಯರ್‌ ಪಂದ್ಯ ಹೈಸ್ಕೋರಿಂಗ್‌ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಪಂಜಾಬ್‌ ಕಿಂಗ್ಸ್‌ ತಂಡ, ಆರ್‌ಸಿಬಿ ಬೌಲಿಂಗ್‌ ರಣತಂತ್ರದ ಎದುರು ವಿಲ-ವಿಲ ವದ್ದಾಡಿತು. ಕಳೆದ ಪಂದ್ಯಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ ಅದ್ಭುತ ಪ್ರದರ್ಶನವನ್ನು ಗ್ಯಾಲರಿಯಲ್ಲಿ ಕುಳಿತು ನೋಡಿ ಆನಂದಿಸುತ್ತಿದ್ದ ಓನರ್‌ ಪ್ರೀತಿ ಝಿಂಟಾ, ಆರ್‌ಸಿಬಿ ಎದುರು ಶ್ರೇಯಸ್‌ ಅಯ್ಯರ್‌ ಪಡೆ ಕಳಪೆ ಬ್ಯಾಟಿಂಗ್‌ ಪ್ರದರ್ಶನವನ್ನು ಕಂಡು ಸಪ್ಪೆ ಮುಖ ಹಾಕಿಕೊಂಡಿದ್ದರು. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಲೀಗ್‌ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಲಖನೌ ಸೂಪರ್‌ ಜಯಂಟ್ಸ್‌ ತಂಡಗಳ ವಿರುದ್ಧ ಬೌಲಿಂಗ್‌ನಲ್ಲಿ ಅತ್ಯಂತ ದುಬಾರಿಯಾಗಿದ್ದ ಆರ್‌ಸಿಬಿ ಬೌಲರ್‌ಗಳು, ಗುರುವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ಮಾರಕ ದಾಳಿ ನಡೆಸಿದ್ದರು. ಆ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡವನ್ನು ಕೇವಲ 101 ರನ್‌ಗಳಿಗೆ ಆಲ್‌ಔಟ್‌ ಮಾಡಿದ್ದರು. ಮಾರಕ ದಾಳಿ ನಡೆಸಿದ್ದ ಜಾಶ್‌ ಹೇಝಲ್‌ವುಡ್‌ ಹಾಗೂ ಸುಯಾಶ್‌ ಶರ್ಮಾ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಯಶ್‌ ದಯಾಳ್‌ ಎರಡು ವಿಕೆಟ್‌ ಕಿತ್ತಿದ್ದರೆ, ಭುವನೇಶ್ವರ್‌ ಕುಮಾರ್‌ ಹಾಗೂ ರೊಮ್ಯಾರಿಯೊ ಶೆಫರ್ಡ್‌ ತಲಾ ಒಂದೊಂದು ವಿಕೆಟ್‌ ಅನ್ನು ಹಂಚಿಕೊಂಡಿದ್ದರು.

IPL 2025: ʻಆರ್‌ಸಿಬಿ ಈ ಸಲ ಕಪ್‌ ಗೆಲ್ಲುವುದು ಪಕ್ಕಾʼ-ಶೇನ್ ವ್ಯಾಟ್ಸನ್ ಭವಿಷ್ಯ ನಿಜವಾಗುತ್ತಾ?

ಆರ್‌ಸಿಬಿ ಬೌಲರ್‌ಗಳ ಕಮಾಲ್‌

ಈ ಟೂರ್ನಿಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದ ಓಪನರ್ಸ್‌ ಪ್ರಿಯಾಂಶ್‌ ಶರ್ಯ, ಪ್ರಭ್‌ಸಿಮ್ರನ್‌ ಸಿಂಗ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರು ತಂಡದ ಮೊತ್ತ 30 ರನ್‌ ಇರುವಾಗಲೇ ಔಟ್‌ ಆಗಿದ್ದರು. ನಂತರ ಜಾಶ್‌ ಇಂಗ್ಲಿಸ್‌ ಕೂಡ ವಿಕೆಟ್‌ ಒಪ್ಪಿಸಿದ್ದರು. ಆ ಮೂಲಕ ಪವರ್‌ಪ್ಲೇನಲ್ಲಿಯೇ ಪಂಜಾಬ್‌ ಕಿಂಗ್ಸ್‌ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕಳೆದ ಪಂದ್ಯಗಳಲ್ಲಿ ನಿರ್ಣಾಯಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದ ನಾಯಕ ಶ್ರೇಯಸ್‌ ಅಯ್ಯರ್‌ ಕೂಡ ಆರ್‌ಸಿಬಿ ಬೌಲರ್‌ಗಳ ರಣತಂತ್ರವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಅವರು ನಾಲ್ಕನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮಾಗೆ ಕ್ಯಾಚ್‌ ಕೊಟ್ಟಿದ್ದರು.





ಸಪ್ಪೆ ಮುಖ ಹಾಕಿಕೊಂಡ ಪ್ರೀತಿ ಝಿಂಟಾ

ಶ್ರೇಯಸ್‌ ಅಯ್ಯರ್‌ ವಿಕೆಟ್‌ ಒಪ್ಪಿಸುತ್ತಿದ್ದಂತೆ ಗ್ಯಾಲರಿಯಲ್ಲಿ ಕುಳಿತಿದ್ದ ಪಂಜಾಬ್‌ ಕಿಂಗ್ಸ್‌ ಓನರ್‌ ಪ್ರೀತಿ ಝಿಂಟಾ ಸಪ್ಪೆ ಮುಖವನ್ನು ಹಾಕಿಕೊಂಡರು. ಈ ಸೀಸನ್‌ ಎಲ್ಲಾ ಪಂದ್ಯಗಳಿಗೂ ಮೈದಾನಕ್ಕೆ ಬರುತ್ತಿದ್ದ ಪ್ರೀತಾ ಝಿಂಟಾ ತಮ್ಮ ತಂಡದ ಉತ್ತಮ ಪ್ರದರ್ಶನವನ್ನು ಆನಂದಿಸಿದ್ದರು. ಆದರೆ, ಆರ್‌ಸಿಬಿ ಎದುರಿನ ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳ ವೈಫಲ್ಯವನ್ನು ಕಂಡು ನಿರಾಶೆ ಅನುಭವಿಸಿದರು. ಇವರ ಈ ಫೋಟೋಗಳು ಹಾಗೂ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.



ಎರಡನೇ ಕ್ವಾಲಿಫೈಯರ್‌ ಆಡಲಿರುವ ಪಂಜಾಬ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಸೋಲು ಅನುಭವಿಸಿದ ಪಂಜಾಬ್‌ ಕಿಂಗ್ಸ್‌ ತಂಡ, ಜೂನ್‌ ಒಂದರಂದು ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿದೆ. ಮೇ 30 ರಂದು ಶುಕ್ರವಾರ ಗುಜರಾತ್‌ ಟೈಟನ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಎಲಿಮಿನೇಟರ್‌ ಪಂದ್ಯವನ್ನು ಆಡಲಿವೆ. ಈ ಪಂದ್ಯವನ್ನು ಗೆಲ್ಲುವ ತಂಡ ಪಂಜಾಬ್‌ ಕಿಂಗ್ಸ್‌ ಎದುರು ಎರಡನೇ ಕ್ವಾಲಿಫೈಯರ್‌ ಪಂದ್ಯವನ್ನು ಆಡಲಿದೆ. ಈ ಪಂದ್ಯವನ್ನು ಗೆದ್ದ ತಂಡ, ಜೂನ್‌ 3 ರಂದು ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ದ ಕಾದಾಟ ನಡೆಸಲಿದೆ.