Friday, 25th October 2024

ಅಂಬೇಡ್ಕರ್ ಒಂದು ಸಮುದಾಯದ ನಾಯಕರಲ್ಲ, ದಮನಿತ ವರ್ಗಗಳ ನಾಯಕ

ಹರಪನಹಳ್ಳಿ: ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ಒಂದು ಜನಾಂಗದ. ಸಮುದಾಯದ ನಾಯಕರಲ್ಲ. ಅವರೊಬ್ಬ ದಮ ನಿತ ವರ್ಗಗಳ, ಶೋಷಿತರ ಹಾಗೂ ಸ್ತ್ರೀಕುಲದ ಪಾಲಿಗೆ ಆದರ್ಶ ಚೇತನರಾಗಿದ್ದರು. ನಾವು ನಮ್ಮ ಸ್ವಂತ ಬಲದಿಂದ ನಿಲ್ಲಬೇಕು ಮತ್ತು ನಮ್ಮ ಹಕ್ಕುಗಳಿಗಾಗಿ ಸಾಧ್ಯವಾದಷ್ಟು ಉತ್ತಮರಾಗಿ ಹೋರಾಡಬೇಕು ಎಂದು ಶಾಸಕ ಜಿ. ಕರುಣಾಕಾರ ರೆಡ್ಡಿ ಪ್ರತಿಪಾದಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಇರುವ ತಾಲೂಕು ಬಿಜೆಪಿ ಕಛೇರಿಯಲ್ಲಿ ತಾಲೂಕು ಎಸ್ಸಿ ಮೂರ್ಚ ಹಾಗೂ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತೋತ್ಸವ ಕಾರ್ಯ ಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಫಿಸಿ ಬಳಿಕ ಮಾತನಾಡಿದ ಅವರು, ಎಪ್ರೀಲ್ 14ರಂದು ಭಾರತ, ವಿಶ್ವದೆಲ್ಲಡೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ, ಬಾಬಾಸಾಹೇಬ್ ಚಿಂತನೆ ವ್ಯಕ್ತಿಯ ಸ್ವಾವಲಂಬಿ ಜೀವನ ಮತ್ತು ಶಿಕ್ಷಣ ಪಡೆದವನು ಸಾಮಾಜಿಕ ಕರ್ತವ್ಯವನ್ನು ಅರಿತು, ಸಂಘಟಿತನಾಗಿ ಪ್ರಭುದ್ದತೆಯನ್ನು ಪಡೆದು, ತನ್ನ ಹಕ್ಕನ್ನು ಕೇಳಿ ಪಡೆಯುವವನಾಗಬೇಕು ಎಂಬ ಸಂದೇಶವನ್ನು ನೀಡಿದ್ದರು ಅವರ ಅನುಯಾಯಿಗಳಾಗಿ ನಡೆದು ಕೊಳ್ಳಬೇಕು ಎಂದು ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಪಿ. ನಾಯ್ಕ್, ಬಾಗಳಿ ಕೋಟ್ರಬಸಪ್ಪ, ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ತಾ.ಉಪಾಧ್ಯಕ್ಷ ಮಂಜ್ಯಾನಾಯ್ಕ, ನಿರ್ಧೇಶಕ ಎಸ್.ಪಿ. ಲಿಂಭ್ಯಾನಾಯ್ಕ, ಎಸ್ಸಿ ಮೂರ್ಚ ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷ ಚಂದ್ರಪ್ಪ, ಶಿರಗನಹಳ್ಳಿ ವಿಶ್ವನಾಥ್, ಎಸ್.ಟಿ. ಮೂರ್ಚದ ಜಿಲ್ಲಾ ಕಾರ್ಯದರ್ಶಿ ಆರ್. ಲೋಕೇಶ್, ಸಣ್ಣ ಹಾಲಪ್ಪ ಸಂತೋಷ್, ರಂಗಪುರ ಬಸವರಾಜ್, ಉದಯ್, ವಕೀಲ ಕೆ. ಪ್ರಕಾಶ್, ಜಾತಪ್ಪ, ಮಾಬೂಷಾಬ್, ರಾಘವೇಂದ್ರ ಶೆಟ್ಟಿ, ಪರಮೇಶ್ವರಪ್ಪ, ಚಿರಸ್ತಹಳ್ಳಿ ಬಸವರಾಜ್, ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.