Friday, 25th October 2024

ಆಕಸ್ಮಿಕ ಬೆಂಕಿ ದುರಂತ: ಪೆಟ್ಟಿಗೆ ಅಂಗಡಿಗಳು ಸುಟ್ಟು ಭಸ್ಮ

ಪಾವಗಡ : ಸೋಲಾರ್ ಸಿಟಿ ತಿರುಮಣಿಯಲ್ಲಿಆಕಸ್ಮಿಕ ಬೆಂಕಿ ದುರಂತದಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳು ಭಸ್ಮವಾಗಿದೆ.

ಪಾವಗಡ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಇರುವ ಬಿಡಿ, ಸಿಗರೇಟ್ ಇತರೆ ವಸ್ತುಗಳ ಮಾರಾಟದ ಎರಡು ಪೆಟ್ಟಿಗೆ ಅಂಗಡಿಗಲ್ಲಿ ದುರಂತ ಸಂಭವಿಸಿವೆ. ತಕ್ಷಣವೇ ಅಗ್ನಿಶಾಮಕ ದಳದವರಿಂದ ಬೆಂಕಿ ಆರಿಸುವ ಕಾರ್ಯಾಚರಣೆಗೆ ಮುಂದಾದರು. ಘಟನೆ ಸ್ಥಳಕ್ಕೆ ತಿರುಮಣಿ ಪೊಲೀಸರು ಧಾವಿಸಿ ಪರಿಶೀಲನೆ ಮಾಡಿದ್ದಾರೆ.