Saturday, 26th October 2024

Honey Trap Case: ಮಾಜಿ ಸಚಿವರ ಪುತ್ರನಿಗೆ ಹನಿಟ್ರ್ಯಾಪ್; 20 ಲಕ್ಷ ಪಡೆಯುತ್ತಿದ್ದ ಕಾಂಗ್ರೆಸ್ ನಾಯಕಿ ಅರೆಸ್ಟ್!

ಬೆಂಗಳೂರು: ಮಾಜಿ ಸಚಿವರ ಪುತ್ರನಿಗೆ ಹನಿಟ್ರ್ಯಾಪ್ ಆರೋಪ ಪ್ರಕರಣದಲ್ಲಿ (Honey Trap Case) ಕಾಂಗ್ರೆಸ್ ನಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಕಾಂಗ್ರೆಸ್ ನಾಯಕಿ ಮಂಜುಳಾ ಪಾಟೀಲ್‌ರನ್ನು ಬಂಧಿಸಲಾಗಿದೆ. ಮಂಜುಳಾ ಪಾಟೀಲ್ ಅವರು ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವರ ಪುತ್ರನೊಂದಿಗೆ ಆರೋಪಿ ಮೊದಲಿಗೆ ಸೆಕ್ಸ್‌ ಚಾಟ್‌ ಮಾಡಿ, ನಂತರ ವಾಟ್ಸ್‌ ಆ್ಯಪ್‌ ವಿಡಿಯೊ ಕಾಲ್‌ನಲ್ಲಿ ಖಾಸಗಿ ಕ್ಷಣಗಳನ್ನು ರೆಕಾರ್ಡ್‌ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ 20 ಲಕ್ಷ ಹಣಕ್ಕೆ ಕಾಂಗ್ರೆಸ್‌ ನಾಯಕಿ ಡಿಮ್ಯಾಂಡ್ ಮಾಡಿದ್ದಾರೆ. ಅಷ್ಟು ಮೊತ್ತ ಕೊಡಲು ಆಗಲ್ಲ, ಕಡಿಮೆ ಮಾಡಿ ಅಂತ ಮಾಜಿ ಸಚಿವರ ಪುತ್ರ ಹೇಳಿದ್ದ. ಅದಕ್ಕೆ ಮಂಜುಳಾ 20 ಲಕ್ಷದಲ್ಲಿ ನಯಾ ಪೈಸೆ ಸಹ ಕಡಿಮೆ ಆಗಲ್ಲ ಎಂದು ಹೇಳಿದ್ದರು. ಅದರಂತೆ ಹಣ ಪಡೆಯುವಾಗ ಮಂಜುಳಾ ಪಾಟೀಲ್ ಸಿಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ಅರೆಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Rain: ಬೆಂಗಳೂರಲ್ಲಿ ಅಕ್ರಮ ನಿರ್ಮಾಣ ತಡೆಗೆ ಕಠಿಣ ಕಾನೂನು ಜಾರಿ: ಸಿಎಂ ಸಿದ್ದರಾಮಯ್ಯ

ಶಾಸಕ ಸತೀಶ್‌ ಸೈಲ್‌ರನ್ನು ಜೈಲಿಗಟ್ಟಿದ ಅದಿರು ಪ್ರಕರಣ; ಅದುರಿದ ಶಾಸಕ ಸ್ಥಾನ! ಅನರ್ಹತೆ ಖಚಿತ

MLA Satish Sail

ಬೆಂಗಳೂರು: ಬೇಲೇಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್‌ ಸೈಲ್‌ಗೆ (MLA Satish Sail) ಜನಪ್ರತಿನಿಧಿಗಳ ಕೋರ್ಟ್‌ ಏಳು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಹೀಗಾಗಿ ಅವರು ಜನಪ್ರತಿನಿಧಿಗಳ ಕಾಯಿದೆ ಪ್ರಕಾರ ತಮ್ಮ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅವರು ಸೇರಿದಂತೆ ಒಟ್ಟು ಆರು ಮಂದಿ ಈ ಪ್ರಕರಣದಲ್ಲಿ ದೋಷಿ ಎಂದು ಅಕ್ಟೋಬರ್‌ 24ರಂದು ಕೋರ್ಟ್‌ ತೀರ್ಪು ಪ್ರಕಟಿಸಿತ್ತು. ಅಂದೇ ಅವರನ್ನು ಜೈಲಿಗೆ ಕಳುಹಿಸುವಂತೆ ಕೋರ್ಟ್ ಹೇಳಿತ್ತು. ಇದೀಗ ಶನಿವಾರ ಇಬ್ಬರಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಅದರಲ್ಲಿ ಸೈಲ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಸಿ, 44.55 ಕೋಟಿ ರೂ. ದಂಡ ವಿಧಿಸಲಾಗಿದೆ.

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ ದಾಖಲಾಗಿ 14 ವರ್ಷಗಳ ನಂತರ ಪ್ರಕರಣದ ತೀರ್ಪು ಹೊರಬಿದ್ದಿತ್ತು. ಇದೀಗ ಜೈಲು ಶಿಕ್ಷೆಯೂ ಪ್ರಕಟಗೊಂಡಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ ನ್ಯಾ. ಸಂತೋಷ್ ಗಜಾನನ ಭಟ್ ಈ ತೀರ್ಪು ನೀಡಿದ್ದಾರೆ. ಸೈಲ್ ಜತೆಗೆ ಅರಣ್ಯ ಅಧಿಕಾರಿ ಮಹೇಶ್ ಬಿಳಿಯಾ ಸೇರಿದಂತೆ ಅದಿರು ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಲಾಗಿದೆ. ಅದರಲ್ಲಿಎಲ್ಲ ಪ್ರಕರಣದ ಎ1 ಮಹೇಶ್ ಬಿಳಿಯಾ ಮತ್ತು ಸತೀಶ್‌ ಸೈಲ್‌ಗೆ ಶನಿವಾರ ಶಿಕ್ಷೆ ಪ್ರಕಟಿಸಲಾಗಿದೆ. ಅಂದ ಹಾಗೆ ಆರು ಪ್ರಕರಣದಲ್ಲೂ ದೋಷಿಯಾಗಿರುವ ಆಡಳಿತರೂಢ ಕಾಂಗ್ರೆಸ್​ ಪಕ್ಷದ ಶಾಸಕ ಸತೀಶ್ ಸೈಲ್ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಅವರನ್ನು ಸ್ಪೀಕರ್‌ ಯು.ಟಿ ಖಾದರ್‌ ಅವರು ಅನರ್ಹಗೊಳಿಸಬೇಕಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಈ ಪ್ರಕರಣ ಹಿನ್ನಡೆ ಖಚಿತ. ಚನ್ನಪಟ್ಟ, ಸಂಡೂರು, ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ನಡುವೆ ಈ ಪ್ರಕರಣದ ಕಾಂಗ್ರೆಸ್‌ಗೆ ದೊಡ್ಡ ಮುಟ್ಟದ ಮುಖಭಂಗವಾಗಲಿದೆ.

ಸತೀಶ್ ಸೈಲ್‌ಗೆ ಜೈಲ್

ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಶಾಸಕ ಸತೀಶ್ ಸೈಲ್ ಜೊತೆಗೆ ಮಹೇಶ್ ಬಿಳಿಯ, ಮಹೇಶ್ ಕುಮಾರ್ ಕೆ, ಪ್ರೇಮ್ ಚಂದ್ ಗರ್ಗ್, ಸುಶೀಲ್ ಕುಮಾರ್ ವಲೇಚ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರೆಲ್ಲರನ್ನೂ ದೋಷಿ ಎಂದು ಘೋಷಿಸಲಾಗಿದೆ. ಅಪರಾಧಿಗಳು ಎಂದು ಪ್ರಕಟಿಸಿದ ತಕ್ಷಣವೇ ಎಲ್ಲರನ್ನೂ ವಶಕ್ಕೆ ಪಡೆದುಕೊಳ್ಳುವಂತೆ ಕೋರ್ಟ್ ಆದೇಶಿತ್ತು. ಸಿಬಿಐ ಅಧಿಕಾರಿಗಳು ಎಲ್ಲ ಅಪರಾಧಿಗಳು ಕೋರ್ಟ್​ನಲ್ಲೇ ವಶಕ್ಕೆ ಪಡೆದುಕೊಂಡು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು.

ಜನಪ್ರತಿನಿಧಿಗಳ ಕಾಯಿದೆ ಏನು ಹೇಳುತ್ತದೆ?

ಜನಪ್ರತಿನಿಧಿಗಳ ಕಾಯಿದೆಯಂತೆ ಜನಪ್ರತಿನಿಧಿಗಳು ಎರಡು ನಿದರ್ಶನಗಳಲ್ಲಿ ತಮ್ಮ ಶಾಸಕ ಸ್ಥಾನದಿಂದ ಅನರ್ಹರಾಗಬಹುದು. ಮೊದಲು ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಅಥವಾ ಸೆಕ್ಷನ್ 171E (ಲಂಚ ತೆಗೆದುಕೊಳ್ಳುವುದು) ಪ್ರಕರಣ ಅಥವಾ ಸೆಕ್ಷನ್ 171F (ಚುನಾವಣೆಯಲ್ಲಿ ಅನಗತ್ಯ ಪ್ರಭಾವದ) ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದರೆ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಇದನ್ನೂ ಓದಿ: Pralhad Joshi: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಗೆ ಸಾಕ್ಷಿ; ಜೋಶಿ ವಾಗ್ದಾಳಿ

ಎರಡನೇಯದಾಗಿ ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ 2 ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದರೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ಇದೇ ನಿಯಮ ಸೈಲ್‌ಗೆ ಅನ್ವಯವಾಗಲಿದೆ. ಅವರು ಕಾರವಾರ ಕ್ಷೇತ್ರದಲ್ಲಿನ ಶಾಸಕ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.