Friday, 25th October 2024

ಎಸ್’ಸಿ ಮೋರ್ಚಾ ವತಿಯಿಂದ ತಹಸೀಲ್ದಾರ್ ಕೆ.ಆರ್.ನಾಗರಾಜ್ ರವರಿಗೆ ಮನವಿ

ಪಾವಗಢ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕಿ ಸುಜಾತಾ ಮಂಡಲ್ ಖಾನ್ ಎಸ್ಸಿ- ಎಸ್’ಟಿ ರವರುಗಳು ಭಿಕ್ಷುಕರು ಎಂದು ಅಪಮಾನಕರ ಹೇಳಿಕೆ ನೀಡಿದ್ದನ್ನು ಖಂಡಿಸಿ ಮಂಡಲದ ಎಸ್.ಸಿ ಮೋರ್ಚಾ ವತಿಯಿಂದ ತಾಲ್ಲೂಕು ದಂಡಾಧಿಕಾರಿಗಳಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿ, ವಿಚಾರ ತಿಳಿಸಲಾಯಿತು.

ಎಸ್.ಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ, ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಾಬು, ಮೋರ್ಚಾ ಕಾರ್ಯದರ್ಶಿ ಸುಬ್ಬ ನಾಯಕ್, ಸಾಮಾಜಿಕ ಜಾಲತಾಣ ಪ್ರಕೋಷ್ಠ ಪವನ್ ಪಳವಳ್ಳಿ , ಓ.ಬಿ.ಸಿ ಮೋರ್ಚಾ ಉಪಾಧ್ಯಕ್ಷ ಚನ್ನಕೇಶವ, ದಲಿತ ಮುಖಂಡರು ನರಸಿಂಹ ಮೂರ್ತಿ ಹಾಗೂ ಕಾರ್ಯಕರ್ತರು ರುದ್ರಮುನಿ, ಗೋವಿಂದರಾಜು ಉಪಸ್ಥಿತರಿದ್ದರು.