ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Kamal Hassan controversy: ಕಮ‌ಲ್ ಹಾಸನ್‌ ವಿವಾದ: 'ಕತ್ತೆಗೆ ಹೆಚ್ಚಿನ ಬೆಲೆ ನೀಡಬಾರದುʼ ಎಂದ ರಮ್ಯಾ

ಕಮ‌ಲ್ ಹಾಸನ್‌ ವಿವಾದ: 'ಕತ್ತೆಗೆ ಹೆಚ್ಚಿನ ಬೆಲೆ ನೀಡಬಾರದುʼ ಎಂದ ರಮ್ಯಾ

Kamal Hassan controversy: ʼಅಜ್ಞಾನವು ಬೊಬ್ಬೆ ಹೊಡೆಯುತ್ತಿರುವಾಗ ಬುದ್ಧಿವಂತಿಕೆ ಮೌನವಾಗಿರುತ್ತದೆ. ನಿಮ್ಮ ಶಾಂತಿ ಮತ್ತು ಮೌನವು ಹೆಚ್ಚು ಯೋಗ್ಯವಾದುದು. ಕತ್ತೆಯ ಬಗ್ಗೆ ಹೆಚ್ಚಿನ ಗಮನ ನೀಡಿದರೆ ಅದು ತನ್ನನ್ನು ಸಿಂಹ ಎಂದು ಭಾವಿಸುತ್ತದೆʼ ಎಂದು ರಮ್ಯಾ ಬರೆದುಕೊಂಡಿದ್ದಾರೆ.

Bengaluru Crime: ರಿಕ್ಷಾ ಚಾಲಕನಿಗೆ ಚಪ್ಪಲಿಯಿಂದ ಬಾರಿಸಿದ ಹಿಂದಿವಾಲಿ, ಕೇಸು ಹಾಕಿದಾಗ ಕಾಲಿಗೆ ಬಿದ್ದಳು!

ರಿಕ್ಷಾ ಚಾಲಕನಿಗೆ ಥಳಿಸಿದ ಹಿಂದಿವಾಲಿ, ಕೇಸು ಹಾಕಿದಾಗ ಕಾಲಿಗೆ ಬಿದ್ದಳು!

Bengaluru Crime: ಈಕೆಯ ಬೈಕಿಗೆ ಆಟೋ ಟಚ್​ ಆದ ವಿಚಾರಕ್ಕೆ ಬಿಹಾರದ ಮಹಿಳೆ ಹಾಗೂ ಬೆಂಗಳೂರಿನ ಆಟೋ ಡ್ರೈವರ್​ ನಡುವೆ ಗಲಾಟೆ ನಡೆದಿತ್ತು. ಜಗಳದ ನಡುವೆ ಬಿಹಾರದ ಮಹಿಳೆ ಆಟೋ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಳು. ಈ ಘಟನೆ ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು.

Nandini Products: ಸಿಹಿ ಸುದ್ದಿ: 18 ವಿವಿಧ ನಂದಿನಿ ಕೇಕ್, ಮಫಿನ್ ಮಾರುಕಟ್ಟೆಗೆ ಬಿಡುಗಡೆ

ಸಿಹಿ ಸುದ್ದಿ: 18 ವಿವಿಧ ನಂದಿನಿ ಕೇಕ್, ಮಫಿನ್ ಮಾರುಕಟ್ಟೆಗೆ ಬಿಡುಗಡೆ

Nandini Products: ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿರುವ ರಾಜ್ಯದ ನಂದಿನಿ ಹಾಲಿನ ಉತ್ಪನ್ನಗಳು ಗ್ರಾಹಕರ ಮನ್ನಣೆ ಗಳಿಸಿದ್ದು, ಈ ಸಾಲಿಗೆ ವಿಶ್ವ ಹಾಲು ದಿನದಂದು ನಂದಿನಿ ಕೇಕ್ ಮತ್ತು ಮಫೀನ್‌ಗಳು ಸೇರ್ಪಡೆಯಾಗುತ್ತಿದೆ.

Traffic police Guidelines: ಇನ್ನು ಮುಂದೆ ಟ್ರಾಫಿಕ್‌ ಪೊಲೀಸರು ಬೈಕ್‌ಗೆ ದಿಢೀರ್‌ ಅಡ್ಡ ಹಾಕುವಂತಿಲ್ಲ!

ಇನ್ನು ಮುಂದೆ ಟ್ರಾಫಿಕ್‌ ಪೊಲೀಸರು ಬೈಕ್‌ಗೆ ದಿಢೀರ್‌ ಅಡ್ಡ ಹಾಕುವಂತಿಲ್ಲ!

traffic police guidelines: ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸಬೇಕು. ಹೆದ್ದಾರಿಗಳಲ್ಲಿ Zig Zag ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು (Barricade) ತಡೆಯಬಾರದು. ರಸ್ತೆಯಲ್ಲಿ ದಿಢೀರನೆ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು ಎಂಬ ನಿರ್ದೇಶನಗಳನ್ನು ನೀಡಲಾಗಿದೆ.

Karnataka Weather: ಇಂದಿನ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

ಇಂದು ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

Karnataka Weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹೆಚ್ಚಾಗಿ ಶುಷ್ಕ ವಾತಾವರಣವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31°C ಮತ್ತು 20°C ಇರುವ ಸಾಧ್ಯತೆ ಇದೆ.

ಮಳೆಗೆ ಹಾಳಾಗಿ ರೈತರಿಗೆ ಕಣ್ಣೀರು ತರಿಸುತ್ತಿರುವ ದ್ರಾಕ್ಷಿ ಬೆಳೆಗಾರ :ಬೆಂಬಲ ಬೆಲೆ ಘೋಷಿಸಲು ಒತ್ತಾಯ

ಮಳೆಗೆ ಹಾಳಾಗಿ ರೈತರಿಗೆ ಕಣ್ಣೀರು ತರಿಸುತ್ತಿರುವ ದ್ರಾಕ್ಷಿ ಬೆಳೆಗಾರ

ಕಳೆದೊಂದು ತಿಂಗಳ  ಹಿಂದೆಯಷ್ಟೇ ಮಳೆ ಇಲ್ಲದ ಕಾರಣ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದ ದ್ರಾಕ್ಷಿ ಮಳೆಗಾಲ ಪ್ರಾರಂಭವಾಗುತ್ತಿದ್ದAತೆ ದಿಢೀರ್ ಬೆಲೆ ಕುಸಿತ ಭೀತಿಯಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾ ಗಿದ್ದಾರೆ. ಹೋದಷ್ಟು ಬೆಲೆ ಹೋಗಲಿ ತೋಟದಲ್ಲಿ ಸರಕು ಖಾಲಿಯಾದರೆ ಸಾಕು ಎಂದು ದ್ರಾಕ್ಷಿ ಬೆಳೆ ಮಾರಾಟಕ್ಕೆ ಇಟ್ಟರೂ, ಮಳೆಯಿಂದ ದ್ರಾಕ್ಷಿ ಖರೀದಿಗೆ ಯಾರೂ ಮುಂದೆ ಬರುತ್ತಿಲ್ಲ

Kamal Hassan: ಕಮಲ ಹಾಸನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ ಕನ್ನಡಸೇನೆ ಕಾರ್ಯಕರ್ತರು

ಕಮಲ ಹಾಸನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ  ಕನ್ನಡಸೇನೆ ಕಾರ್ಯಕರ್ತರು

ಸಾವಿರಾರು ವರ್ಷ ಇತಿಹಾಸವುಳ್ಳ ಕನ್ನಡ  ಭಾಷೆಗೆ ಅಪಮಾನ ಮಾಡಿ ಮಾತನಾಡಿರುವುದನ್ನು ಖಂಡಿಸಿ ಕಮಲಹಾಸನ್ (ತಮಿಳು ಹಾಸನ್)ಅವರ ಭಾವಚಿತ್ರಕ್ಕೆ ಪಾದರಕ್ಷೆಯನ್ನು ತೋರಿಸಿ ಖಂಡಿಸಿ ದ್ದೇವೆ. ನಮ್ಮ ಕನ್ನಡಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಅದನ್ನು ಅರಿಯದೆ ಕಮಲ ಹಾಸನ್ ರವರು ಮಾತನಾಡಿರುವುದು ಕನ್ನಡಿಗರಾದ ನಮಗೆಲ್ಲಾ ತುಂಬಾ ನೋವಿನ ಸಂಗತಿಯಾಗಿದೆ

H S Venkateshmurthy: ಸಾಹಿತಿ ವೆಂಕಟೇಶಮೂರ್ತಿ ಅವರಿಗೆ ಕಸಾಪ ಶ್ರದ್ಧಾಂಜಲಿ

ಸಾಹಿತಿ ವೆಂಕಟೇಶಮೂರ್ತಿ ಅವರಿಗೆ ಕಸಾಪ ಶ್ರದ್ಧಾಂಜಲಿ

ಗೀತೆಗಳು ಕನ್ನಡಿಗರನ್ನು ಸಂತಸದ ಕಡಲಿನಲ್ಲಿ ತೇಲಿಸುತ್ತಿದ್ದವು. ಅವರು ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ನಾಡಿನಲ್ಲಿ ತಮ್ಮ ಗೀತೆಗಳ ಮೂಲಕವೇ ಖ್ಯಾತಿ ಹೊಂದಿದ್ದು, ಸರಳತೆಯನ್ನು ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದ ಸಾಹಿತಿಯಾಗಿದ್ದರು. ಇವರು ಬರೆದ ಬಹುತೇಕ ಗೀತೆಗಳು ಹೃದಯಕ್ಕೆ ತಟ್ಟುತ್ತಿದ್ದವು

Vatal Nagraj: ಕಮಲ ಹಾಸನ್ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ರಾಜ್ಯದಲ್ಲಿ ರಣರಂಗ ಆಗಲಿದೆ : ವಾಟಾಳ್ ನಾಗರಾಜ್ ಎಚ್ಚರಿಕೆ

ಕಮಲಹಾಸನ್ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ರಾಜ್ಯದಲ್ಲಿ ರಣರಂಗ ಆಗಲಿದೆ

ಕಮಲ್ ಹಾಸನ್ ಅವನೊಬ್ಬ ದುರಹಂಕಾರಿ. ಬಾಯಿಗೆ ಬಂದಂತೆ ಮಾತನಾಡುವುದೇ ಅವನ ಉದ್ಯೋಗ.ಈಗ ತಮಿಳುನಾಡಿನಲ್ಲಿ ಮದ್ರಾಸಿನಲ್ಲಿ ಅವನ ಪ್ರಭಾವ ಬಿದ್ದು ಹೋಗಿದೆ. ಈಗ ಮತ್ತೆ ಪ್ರಭಾವಶಾಲಿಯಾಗಲು ತಮಿಳಿನಿಂದ ಕನ್ನಡ ಬಂದಿದೆ ಎಂಬ ಅಸಂಬದ್ಧ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದಾನೆ

Chikkaballapur News: ಶ್ರದ್ಧಾಭಕ್ತಿಯಿಂದ ನಡೆದ ಕಾಳಿಕಾಂಭದೇವಿ ಕರಗ ಮಹೋತ್ಸವ

ಶ್ರದ್ಧಾಭಕ್ತಿಯಿಂದ ನಡೆದ ಕಾಳಿಕಾಂಭದೇವಿ ಕರಗ ಮಹೋತ್ಸವ

ಕರಗ ಮಹೋತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಾಗುತ್ತಾ ಭಕ್ತಿರಿಂದ ಪೂಜೆ ಮತ್ತು ಕಾಣಿಕೆಗಳನ್ನು ಸ್ವೀಕರಿಸಿ ಆಶೀರ್ವಧಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸೋಮವಾರ ಮಧ್ಯಾಹ್ನ ಭುವನೇಶ್ವರಿ ವೃತ್ತದಲ್ಲಿ ನಡೆಯುವ ವಸಂತೋತ್ಸವದ ಮೂಲಕ ಐದು ದಿನಗಳ ಕರಗ ಮಹೋತ್ಸವಕ್ಕೆ ತೆರೆ ಬೀಳಲಿದೆ.

Shiva Rajkumar: ಕಮಲ್‌ ಹಾಸನ್‌ ಕನ್ನಡ ಹೇಳಿಕೆಗೆ ಚಪ್ಪಾಳೆ ಹೊಡೆದಿಲ್ಲ: ಶಿವ ರಾಜ್‌ಕುಮಾರ್‌ ಸ್ಪಷ್ಟನೆ

ಕಮಲ್‌ ಹಾಸನ್‌ ಕನ್ನಡ ಹೇಳಿಕೆಗೆ ಚಪ್ಪಾಳೆ ಹೊಡೆದಿಲ್ಲ: ಶಿವಣ್ಣ ಸ್ಪಷ್ಟನೆ

Kamal Haasan: ಕಾಲಿವುಡ್‌ನ ಜನಪ್ರಿಯ ನಟ ಕಮಲ್‌ ಹಾಸನ್‌ ಕನ್ನಡ ತಮಿಳಿನಿಂದಲೇ ಹುಟ್ಟಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸ್ಯಾಂಡಲ್‌ವು ನಟ ಶಿವ ರಾಜ್‌ಕುಮಾರ್‌ ಅವರ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದ್ದು ಕನ್ನಡಪರ ಸಂಘಟನೆಗಳು ಕಮಲ್‌ ವಿರುದ್ದ ಹೋರಾಟ ಬಿಗಿಗೊಳಿಸಿವೆ. ಈ ಮಧ್ಯೆ ಶಿವಣ್ಣ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Ghost Short Film: ವಿಭಿನ್ನ ಕಥಾ ಹಂದರದ 'ಘೋಸ್ಟ್' ಕಿರು ಚಿತ್ರ; ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟ ನಟಿ ಸುಧಾರಾಣಿ

ʼಘೋಸ್ಟ್' ಕಿರು ಚಿತ್ರ; ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟ ನಟಿ ಸುಧಾರಾಣಿ

ಸುಧಾರಾಣಿಯವರೇ ನಿರ್ಮಿಸಿ, ನಟಿಸಿದ ʼಘೋಸ್ಟ್ʼ ಕಿರು ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದ್ದು, ಘೋಸ್ಟ್ʼ ಕಿರುಚಿತ್ರಕ್ಕೆ ʼದಿ ದೆವ್ವʼ ಎಂಬ ಅಡಿಬರಹವಿದೆ‌. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದ ಸುಧಾರಾಣಿ ಅಲ್ಲಿಯೂ ಕೂಡ ಸಕ್ಸಸ್ ಕಂಡಿದ್ದು ವಿಶೇಷ. ಇದೀಗ ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ.

Bengaluru News: ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆ ರದ್ದು: 7 ದಿನಗಳ ಒಳಗಾಗಿ ಪರ್ಯಾಯ ವ್ಯವಸ್ಥೆಗೆ ಸೂಚನೆ

ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆ ರದ್ದು

ಸುಳ್ಳು ದಾಖಲೆಗಳನ್ನು ನೀಡಿ ಸರ್ಕಾರ, ವಿದ್ಯಾರ್ಥಿಗಳು, ಪೋಷಕರನ್ನು ವಂಚಿಸಿದ್ದ ನಗರದ ಥಣಿ ಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆಯನ್ನು ಶಾಲಾ ಶಿಕ್ಷಣ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಶಾಲೆಯಲ್ಲಿ ಕಲಿಯು ತ್ತಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದೆ.

Kannappa Movie: 'ಕಣ್ಣಪ್ಪ' ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ಶಿವಣ್ಣ; ಜೂ. 27ಕ್ಕೆ ಸಿನಿಮಾ ರಿಲೀಸ್‌

'ಕಣ್ಣಪ್ಪ' ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ಶಿವಣ್ಣ

Kannappa Movie: 1954ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ತೆರೆಕಂಡಿತ್ತು, ಆನಂತರ 1988 ರಲ್ಲಿ ಶಿವರಾಜ್‌ಕುಮಾರ್ ಅಭಿನಯದಲ್ಲಿ ʼಶಿವ ಮೆಚ್ಚಿದ ಕಣ್ಣಪ್ಪʼ ಚಿತ್ರ ನಿರ್ಮಾಣವಾಯಿತು. ಇದೀಗ 37 ವರ್ಷಗಳ ಬಳಿಕ ಮತ್ತೆ ಶಿವಭಕ್ತ ಕಣ್ಣಪ್ಪನ ಕಥೆ ಇಟ್ಟುಕೊಂಡು ಹೊಸ ನಿರೂಪಣೆಯೊಂದಿಗೆ ʼಕಣ್ಣಪ್ಪʼ ಎಂಬ ಚಿತ್ರ ಬಹು ಭಾಷೆಯಲ್ಲಿ ನಿರ್ಮಾಣವಾಗಿದೆ.

Karnataka Rains: ಮುಂದಿನ 3 ದಿನ ಕರಾವಳಿಯಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಮುಂದಿನ 3 ದಿನ ಕರಾವಳಿಯಲ್ಲಿ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹೆಚ್ಚಾಗಿ ಶುಷ್ಕ ವಾತಾವರಣವಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31°C ಮತ್ತು 20°C ಇರುವ ಸಾಧ್ಯತೆ ಇದೆ.

Government Employees: ಒಪಿಎಸ್‌ ಜಾರಿಗಾಗಿ ಹೋರಾಟಕ್ಕೆ ಸಿದ್ಧ: ಸಿ.ಎಸ್. ಷಡಾಕ್ಷರಿ

ಒಪಿಎಸ್‌ ಜಾರಿಗಾಗಿ ಹೋರಾಟಕ್ಕೆ ಸಿದ್ಧ: ಸಿ.ಎಸ್. ಷಡಾಕ್ಷರಿ

Government Employees: ರಾಜ್ಯ ಸರ್ಕಾರಿ ನೌಕರರ ಪರವಾಗಿ 25ಕ್ಕೂ ಹೆಚ್ಚು ಆದೇಶಗಳನ್ನು ಮಾಡಿ ನೌಕರರ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸ ಮಾಡಿದ್ದೇವೆ. ನಮ್ಮ ಮುಂದೆ ಉಳಿದಿರುವ ನೌಕರರ ಬಹುದೊಡ್ಡ ಬೇಡಿಕೆ ಒಪಿಎಸ್‌ ಮರು ಜಾರಿ ಮಾಡುವುದು. ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತೇವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

Hutti Gold Mines: ಹಟ್ಟಿ ಚಿನ್ನದ ಗಣಿಯಲ್ಲಿ ಏರ್‌ ಬ್ಲಾಸ್ಟ್; ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

ಹಟ್ಟಿ ಚಿನ್ನದ ಗಣಿಯಲ್ಲಿ ಏರ್‌ ಬ್ಲಾಸ್ಟ್; ಕಾರ್ಮಿಕ ಸಾವು

Hutti Gold Mines: ಕಲ್ಲು ಅದಿರಿನಡಿ ಸಿಲುಕಿರುವ ಮೃತ ದೇಹವನ್ನು ಹೊರ ತರಲು ಕಾರ್ಯಾಚರಣೆ ಮುಂದುವರೆದಿದೆ. ಕಳೆದ ವರ್ಷ ಚಿನ್ನದ ಗಣಿ ಕಂಪನಿಯ ಆವರಣದಲ್ಲೇ ಇರುವ ಮಲ್ಲಪ್ಪ ಶಾಫ್ಟ್‌ನಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಮತ್ತೊಬ್ಬರು ಮೃತಪಟ್ಟಿದ್ದಾರೆ.

PES PU College: ಕಠಿಣ ಪರಿಶ್ರಮ, ಒಳ್ಳೆಯ ಹವ್ಯಾಸಗಳಿಂದ ಯಶಸ್ಸು ಸಾಧ್ಯ: ಪ್ರೊ. ಜವಾಹ‌ರ್ ದೊರೆಸ್ವಾಮಿ

ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪ್ರೊ. ಜವಾಹ‌ರ್ ದೊರೆಸ್ವಾಮಿ

PES PU College: ಪಿಇಎಸ್ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ವರ್ಷದ ಪ್ರಥಮ ಪಿ.ಯು.ಸಿ ತರಗತಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಜವಾಹ‌ರ್ ದೊರೆಸ್ವಾಮಿ ಅವರು ಮಾತನಾಡಿದ್ದಾರೆ.

Mukhyamantri Chandru: ಶಿವಣ್ಣ ರೀತಿ ಕಮಲ್‌ ಹಾಸನ್‌ ಪರ ಇರೋರೆಲ್ಲಾ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು ಕಿಡಿ

ಕಮಲ್‌ ಹಾಸನ್‌ ಪರ ಇರೋರೆಲ್ಲಾ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು ಕಿಡಿ

Mukhyamantri Chandru: ನಾಡು-ನುಡಿಗೆ ಧಕ್ಕೆ ಬಂದಾಗ ಪ್ರೀತಿ ಗೀತಿ ಬದಿಗೊತ್ತಿ ಖಂಡಿಸಬೇಕಿತ್ತು. ರಾಜಕುಮಾರ್‌ ಅವರ ಕುಟುಂಬ ಒಂದೇ ಕನ್ನಡ ನಾಡಲ್ಲ, ಶಿವಣ್ಣ ಕುಟುಂಬ ಮಾತ್ರ ಕನ್ನಡ ನಾಡಲ್ಲ. ನೀವು ಹೇಳಿದ್ದು ನನಗೆ ಇಷ್ಟ ಆಗಿಲ್ಲ ಇಲ್ಲಿಂದ ನಾನು ಹೊರಡುತ್ತೇನೆ ಎಂದಾದರೂ ಶಿವಣ್ಣ ಹೇಳಬೇಕಿತ್ತು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಸಮಾಧಾನ ಹೊರಹಾಕಿದ್ದಾರೆ.

Cab tips: ಕ್ಯಾಬ್‌ಗಳಿಗೆ ತಟ್ಟಿದ ʼಟಿಪ್ಸ್‌ʼ ಬಿಸಿ; ಸಚಿವ ಜೋಶಿ ಸೂಚನೆ ಬೆನ್ನಲ್ಲೇ ಹೊಸ ಬದಲಾವಣೆ

ಕ್ಯಾಬ್‌ಗಳಿಗೆ ತಟ್ಟಿದ ʼಟಿಪ್ಸ್‌ʼ ಬಿಸಿ; ಈಗ ʼಐಚ್ಛಿಕʼವೆಂದು ಬದಲು!

Cab tips: ಕ್ಯಾಬ್‌ಗಳು ತ್ವರಿತವಾಗಿ ತೃಪ್ತಿಕರ ಸೇವೆ ಒದಗಿಸಿದರೆ ಗ್ರಾಹಕರು ಅದಕ್ಕೆ ಪ್ರತಿಯಾಗಿ ಸ್ವ ಇಚ್ಛೆಯಿಂದ ಚಾಲಕರ ಖುಷಿಗಾಗಿ ಕೊಡುವಂಥದ್ದಾಗಿದೆ. ಆದರೆ, ಕ್ಯಾಬ್‌ಗಳವರು ಟಿಪ್ಸ್‌ ಅನ್ನು ಕ್ಯಾಬ್‌ ಬುಕ್‌ ಮಾಡುವಾಗಲೇ ಮುಂಗಡವಾಗಿ ಪಡೆಯುತ್ತಿದ್ದವು. ಈಗಿದಕ್ಕೆ ಬ್ರೇಕ್‌ ಬಿದ್ದಿದೆ.

Maatonda Heluve: 'ಟ್ರೇಲರ್ ಡಿಕೋಡ್' ಸ್ಪರ್ಧೆ ಮೂಲಕ ಕೂತೂಹಲ ಹುಟ್ಟಿಸಿದ್ದ 'ಮಾತೊಂದ ಹೇಳುವೆ' ಚಿತ್ರದ ಟ್ರೇಲರ್ ಬಿಡುಗಡೆ

'ಮಾತೊಂದ ಹೇಳುವೆ' ಚಿತ್ರದ ಟ್ರೇಲರ್ ಬಿಡುಗಡೆ

Maatonda Heluve: ಹುಬ್ಬಳ್ಳಿ - ಧಾರವಾಡ ಹುಡುಗ ಹಾಗೂ ಮೈಸೂರು ಭಾಗದ ಹುಡುಗಿಯ ಪ್ರೇಮ ಕಥಾನಕ ಹೊಂದಿರುವ 'ಮಾತೊಂದ ಹೇಳುವೆ' ಚಿತ್ರದಲ್ಲಿ ಮಯೂರ್ ಕಡಿ, ರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ ಸತೀಶ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರ ಜೂನ್ 20 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Tumkur News: ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹೋರಾಟ; ಇಬ್ಬರು ಸ್ವಾಮೀಜಿಗಳು ಸೇರಿ 11 ಮಂದಿ ವಿರುದ್ಧ ಎಫ್‌ಐಆರ್

ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹೋರಾಟ; 11 ಮಂದಿ ವಿರುದ್ಧ ಎಫ್‌ಐಆರ್

Tumkur News: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ನಡೆಸಿದ್ದ ಬೃಹತ್ ಪ್ರತಿಭಟನೆ ಸಂಬಂಧ ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕರಿಗೆ ತೊಂದರೆ, ಸರ್ಕಾರಿ ವಾಹನಗಳಿಗೆ ಹಾನಿ, ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿ ತೊಂದರೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

Belagavi Accident: ಬೆಳಗಾವಿಯಲ್ಲಿ ಟ್ಯಾಂಕರ್‌ ಹರಿದು ಮೂವರು ಕಾರ್ಮಿಕರ ದುರ್ಮರಣ

ಬೆಳಗಾವಿಯಲ್ಲಿ ಟ್ಯಾಂಕರ್‌ ಹರಿದು ಮೂವರು ಕಾರ್ಮಿಕರ ದುರ್ಮರಣ

Belagavi Accident: ಬೆಳಗಾವಿ ಜಿಲ್ಲೆಯ ಕಿತ್ತೂರು ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಟ್ಯಾಂಕರ್‌ ಹರಿದಿದೆ.

Viral Video: ರಾಜ್ಯದಲ್ಲಿ ಅನ್ಯಭಾಷಿಕರ ಅಟ್ಟಹಾಸ! ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ

ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ

ಬೆಂಗಳೂರಿನ ಬೆಳ್ಳಂದೂರು ಸರ್ಕಲ್‌‌ನಲ್ಲಿ ಶನಿವಾರ ಸಂಜೆ 4.30 ರ ಸುಮಾರಿಗೆ ಆಟೋ ಚಾಲಕನೊಬ್ಬನ ಮೇಲೆ ಹೊರ ರಾಜ್ಯದ ಯುವತಿಯೊಬ್ಬಳು ಚಪ್ಪಲಿಯಿಂದ ಹೊಡೆದಿದ್ದಾಳೆ. ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಆಗಮಿಸಿದ ಬೆಳ್ಳಂದೂರು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಆಟೋ ಚಾಲಕ ಮತ್ತು ಯುವತಿ ಇಬ್ಬರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.