ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raid in Jail: ಜೈಲಿನಲ್ಲಿರುವ ಮಾಜಿ ಸಂಸದರ ಬ್ಯಾರಕ್‌ ಮೇಲೆ ದಾಳಿ; ಐಷಾರಾಮಿ ವಸ್ತುಗಳು, ನಗದು ಮತ್ತು ಇತರ ವಸ್ತುಗಳು ಪತ್ತೆ

ಉತ್ತರ ಪ್ರದೇಶದ ಲಲಿತ್‌ಪುರ್‌ ಜೈಲಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಜೈಲಿನ ಬ್ಯಾರಕ್ ಸಂಖ್ಯೆ 5Aನಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿ ಮಾಜಿ ಸಂಸದ ರಿಜ್ವಾನ್ ಜಹೀರ್ ಪ್ರಸ್ತುತ ಇದ್ದಾರೆ. ದಾಳಿಯಲ್ಲಿ ಜಹೀರ್ ಜೈಲಿನಲ್ಲಿ ಜೈಲಿನ ನಿಯಮಗಳನ್ನು ಉಲ್ಲಂಘಿಸುವ ವಿವಿಐಪಿ ಸೌಲಭ್ಯಗಳನ್ನು ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ.

ಜೈಲಿನಲ್ಲಿರುವ ಮಾಜಿ ಸಂಸದರ ಬ್ಯಾರಕ್‌ ಮೇಲೆ ದಾಳಿ

Profile Vishakha Bhat Jun 2, 2025 10:36 AM

ಲಖನೌ: ಉತ್ತರ ಪ್ರದೇಶದ (Uttar Pradesh) ಲಲಿತ್‌ಪುರ್‌ ಜೈಲಿನ (Raid in Jail) ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಜೈಲಿನ ಬ್ಯಾರಕ್ ಸಂಖ್ಯೆ 5Aನಲ್ಲಿ ಪರಿಶೀಲನೆ ನಡೆಸಲಾಗಿದ್ದು, ಅಲ್ಲಿ ಮಾಜಿ ಸಂಸದ ರಿಜ್ವಾನ್ ಜಹೀರ್ ಪ್ರಸ್ತುತ ಇದ್ದಾರೆ. ದಾಳಿಯಲ್ಲಿ ಜಹೀರ್ ಜೈಲಿನಲ್ಲಿ ಜೈಲಿನ ನಿಯಮಗಳನ್ನು ಉಲ್ಲಂಘಿಸುವ ವಿವಿಐಪಿ ಸೌಲಭ್ಯಗಳನ್ನು ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ದಿಂಬಿನ ಕೆಳಗೆ ಬಚ್ಚಿಟ್ಟಿದ್ದ 30,000 ರೂ. ನಗದು ಹಾಗೂ ದೇಸಿ ತುಪ್ಪ, ಬ್ರಾಂಡೆಡ್ ಶಾಂಪೂಗಳು, ಕ್ರೀಮ್‌ಗಳು, ಸಿಹಿತಿಂಡಿಗಳು, ಪ್ರೀಮಿಯಂ ಆಹಾರ ಮತ್ತು ಪಾನೀಯಗಳು ಸೇರಿದಂತೆ ಹಲವಾರು ಐಷಾರಾಮಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್ಚುವರಿಯಾಗಿ, ಅವರು ಮೃದುವಾದ ದಿಂಬುಗಳನ್ನು ಹೊಂದಿರುವ ದಪ್ಪ ಹಾಸಿಗೆಯ ಮೇಲೆ ಮಲಗಿದ್ದರು, ಊಟಕ್ಕೆ ಪಾತ್ರೆಗಳು ಮತ್ತು ಬ್ಯಾಟರಿ ಚಾಲಿತ ಫ್ಯಾನ್ ಕೂಡ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಜೈಲು ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಮತ್ತು ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಜೈಲಿನಲ್ಲಿರುವ ವ್ಯಕ್ತಿಗಳಿಗೆ ಇಂತಹ ಸೌಲಭ್ಯಗಳನ್ನು ನೀಡುತ್ತಿರುವುದರ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಬಲರಾಂಪುರದ ಮಾಜಿ ಸಂಸದ ರಿಜ್ವಾನ್ ಜಹೀರ್ ಜುಲೈ 2022 ರಿಂದ ಲಲಿತಪುರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ. ತುಳಶಿಪುರ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಫಿರೋಜ್ ಅಹ್ಮದ್ ಪಪ್ಪು ಅವರ ಹತ್ಯೆಯಲ್ಲಿ ಪಿತೂರಿ ನಡೆಸಿದ ಆರೋಪ ಅವರ ಮೇಲಿದೆ. ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯನ್ನೂ ಹೇರಿದ್ದಾರೆ.

ಕಳೆದ ವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ದಾಳಿ ವೇಳೆ ಮೊಬೈಲ್, ಚಾಕು, ಮೊಬೈಲ್ ಚಾರ್ಜರ್‌ ಹಾಗೂ 15,500 ರು. ನಗದು ಪತ್ತೆಯಾಗಿದ್ದು, ಅಕ್ರಮ ಚಟುವಟಿಕೆಗೆ ಸಹಕರಿಸಿದ ಆರೋಪದ ಮೇರೆಗೆ ಕಾರಾಗೃಹ ಮತ್ತು ಜೈಲಿನ ಭದ್ರತೆಗೆ ನಿಯೋಜಿತರಾಗಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಫ್‌) ಸಿಬ್ಬಂದಿ ಹಾಗೂ ಕೈದಿಗಳಾದ ಚೆಲುವ, ಆಕಾಶ್, ಮಾರುತಿ ಹಾಗೂ ಇರ್ಷಾದ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಸುದ್ದಿಯನ್ನೂಓದಿ: Drugs Seized : ಗುಜರಾತ್ ಕರಾವಳಿಯಲ್ಲಿ 1800 ಕೋಟಿ ರೂ. ಮೌಲ್ಯದ 300 ಕೆಜಿ ಮಾದಕ ವಸ್ತುಗಳು ವಶ

ಕಾನೂನುಬಾಹಿರ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ಕಾರಾಗೃಹದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಕೆ.ಎಂ.ಸತೀಶ್‌ ನೇತೃತ್ವದಲ್ಲಿ ಐವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 50ಕ್ಕೂ ಹೆಚ್ಚಿನ ಪೊಲೀಸರು ಶುಕ್ರವಾರ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿ ಪರಿಶೀಲಿಸಿದ್ದರು.