Tuesday, 22nd October 2024

ಡಾಕ್ಟರ್‌ ಆಗುವ ಬಯಕೆ ಹಿಂದೆ ಇದೆ ವಿದ್ಯಾರ್ಥಿಗಳ ಪರಿಶ್ರಮ

ಪರಿಶ್ರಮ

parishramamd@gmail.com

ಮಕ್ಕಳಿಗೆ ಒಳ್ಳೆಯ ಶಾಲೆ ನೋಡಿ ಸೇರಿಸೋ ಅ – ಅ ರಿ U ಅವರಿಂದ ಮುಟ್ಟಲಾಗದ ಕನಸನ್ನ ಮಕ್ಕಳ ಮೂಲಕ ಸಾಕಾರ ಮಾಡಿಕೊಳ್ಳಲು  ಹಂಬಲಿಸು ತ್ತಿರುತ್ತಾರೆ. ಕೆಲವರು ಅಪ್ಪ ಅಮ್ಮನ ಕನಸು ಬೆನ್ನು ಹತ್ತಿದ್ರೆ, ಇನ್ನೂ ಕೆಲವರು ತಮ್ಮ ಕನಸಿನ ಬೆನ್ನು ಹತ್ತಿ ಹೊರಟು ಬಿಡ್ತಾರೆ. ಕನಸು ಯಾವುದೇ ಇರಲಿ ಅದು ನನಸಾಗೋದು ಶ್ರಮಪಟ್ಟಾಗಲೆ, ಪ್ರತಿ ವ್ಯಕ್ತಿ ತನ್ನ ಸ್ವಂತ ‘ಪರಿಶ್ರಮ’ವನ್ನು ಪಟ್ಟಾಗ ಮಾತ್ರ ಅವನ ಕನಸ್ಸನ್ನು ಸಾಧಿಸಬಹುದು, ಮುಂದೆ ಸಾಧಕರ ಹಾದಿಯನ್ನ ಸೇರ ಬಹುದು. ಎಲ್ಲರೂ ಸಾಯುತ್ತಾರೆ.

ಸಾಧಕನೂ. ಆದರೆ, ಉಳಿಯುವುದು ಅವನ ಸಾಧನೆ ಹೊರತು ದೇಹವಲ್ಲ. ಮುದೊಂದು ದಿನ ತಂದೆ-ತಾಯಿಯ ಕಣ್ಣಲ್ಲಿ ಮಕ್ಕಳಿಂದ ನೀರು ಬರು ವಂತಾದರೆ ಅದು ಅದು ಸಾಧನೆ ನೋಡಿಯೇ ಹೊರತು ಬೇರೆಯಾವುದಕ್ಕೂ ಅಲ್ಲ. ಈ ಮಾತಿಗೆ ಅನ್ವರ್ಥದಂತೆ, ಇಂದು ಕರ್ನಾಟಕದ ಮನೆ ಮಾತಾಗಿರುವ ಕರ್ನಾಟಕದ ಪರಿಶ್ರಮಿಗಳ ಮತ್ತು ಭವಿಷ್ಯದ ಡಾಕ್ಟರ್‌ಗಳ ಕೇರ್ ಆಫ್ ಅಡ್ರೆಸ್ ‘ಪರಿಶ್ರಮ’ ಸಂಸ್ಥೆ ಇಂದು ಮತ್ತೆ ಸುದ್ದಿಯಲ್ಲಿದೆ. ಕರುನಾಡಿನ ಎಲ್ಲ ಪುಣ್ಯಕ್ಷೇತ್ರಗಳಲ್ಲಿ ವಿದ್ಯಾದಾನ, ಅಭಯದಾನ, ಔಷಧಿ ದಾನ ಹೀಗೆ ನಾನಾ ದಾನಗಳ ಮೂಲಕ ತನ್ನ ಭಕ್ತರನ್ನ ತನ್ನತ್ತ ಸದಾ ಸೆಳೆಯುವ ಸ್ಥಳಗಳ ಬಗ್ಗೆ ಕೇಳಿದ್ದೇವೆ, ಖುದ್ದಾಗಿ ಹೋಗಿ ನೋಡಿದ್ದೇವೆ.

ಅದೇ ರೀತಿ ಕುಗ್ಗಿ ಹೋದ ವಿದ್ಯಾರ್ಥಿಗಳ ಮನಸ್ಸಲ್ಲಿ ವಿಶ್ವಾಸ, ಪ್ರೀತಿ, ಛಲ, ಆತ್ಮಸ್ಥೆರ್ಯ, ಮಾಸದ ಕನಸು ಎಂಬ ಪಂಚ ರತ್ನಗಳನ್ನ ದಾನ ಪಡೆದ ಪರಿಶ್ರಮ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳು ಮತ್ತೊಮ್ಮೆ ಕನ್ನಡಿಗರು ಹೆಮ್ಮೆ ಪಡುವ ಸಾಧನೆಯನ್ನ ಮಾಡುವ ಮೂಲಕ ಮತ್ತೆ ಸದ್ದು ಮಾಡು ತ್ತಿದ್ದಾರೆ. ನೀಟ್ ಪರೀಕ್ಷಯಲ್ಲಿ ಕನ್ನಡಿಗರಿಗೆ ಸಿಂಹಪಾಲು ಪಡೆದ್ದಿದ್ದ ಪರಿಶ್ರಮ ಇಂದು ಐಐಟಿ ಜನರಲ್ ಎಂಟ್ರೆ ಎಂಕ್ಸಾನಲ್ಲಿ ಮತ್ತೆ ಸುದ್ದಿ ಮಾಡಿ ವಿದ್ಯಾರ್ಥಿಗಳು ಪೋಷಕರು ಯಾಕೆ ಪರಿಶ್ರಮದ ಮೇಲೆ ಭರವಸೆ ಇಟ್ಟಿದ್ದಾರೆ ಎಂಬುದನ್ನ ಮತ್ತೆ ಮತ್ತೆ ಸಾಬೀತು ಮಾಡಿದೆ.

ದೂರದ ಉತ್ತರ ಕರ್ನಾಟಕದಿಂದ, ಹಿಡಿದು ಕರಾವಳಿ- ರಾಜ್ಯದ ನಾಲ್ಕೂ ದಿಕ್ಕುಗಳಲ್ಲಿಯೂ ಅಗಾದ ವಿದ್ಯಾರ್ಥಿ ಸೈನ್ಯ ಹೊಂದಿರುವ ಪರಿಶ್ರಮದ ವಿದ್ಯಾರ್ಥಿಯಾದ ಕಲಬುರ್ಗಿಯ ರುದ್ರಶೆಟ್ಟಿ ಮತ್ತು ಶಶಿಕಲ ಅವರ ಸುಪುತ್ರ ರುತ್ವಿಜ್ ರುದ್ರ ಪಾಟೀಲ್ ೯೯.೪; ಚಿಕ್ಕಮಗಳೂರಿನ ಶೇಷೆಗೌಡ ಮತ್ತು ವೀಣಾಂಬ ಅವರ ಮಗ ರವಿತೇಜ್ ಗೌಡ ೯೯.೧; ಮಂಡ್ಯದ ರಾಮಲಿಂಗೇಗೌಡ ಮತ್ತು ಸುನೀತಾರ ಮಗ ಕುಶಾಲ್ ಗೌಡ ೯೮.೪೭; ಬಿಜಾಪುರದ ಶಶಿಧರ
ಕಾಟಗೇರಿ ಮತ್ತು ಭುವನೇಶ್ವರಿ. ಯವರ ಮಗ ನಿಖಿಲ್ ಎಸ್ ಕಾಟಗೇರಿ ೯೪.೯೬; ಹಾಗೂ ಹಾಸನದ ಇಂದ್ರೇಗೌಡ ಮತ್ತು ನಾಗಮಣಿಯವರ ಮಗ ಲೋಹನ್ ೯೦.೯೩; ಪ್ರತಿಶತ ಅಂಕಗಳನ್ನು ಜಿಇಇ ಮೈ ನಲ್ಲಿ ಪಡೆಯು ಮುಖಾಂತರ ಸರಿಯಾದ ಗುರು-ನಿಖರವಾದ ಗುರಿ ಇಟ್ಟು ಹೊರಡುವ ಪ್ರತಿ ಯೊಬ್ಬನ ಪರಿಶ್ರಮಕ್ಕೆ ಸರಿಯಾದ ಬೆಲೆ ಸಿಗುವ ಸಮಯ ಬಂದೇ ಬರುತ್ತದೆ ಎಂದು ಮತ್ತೆ ಸಾಬೀತು ಮಾಡಿದ್ದಾರೆ.

ಸದಾ ತನ್ನ ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲುವ ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥೆ. ಕ್ಯಾಂಪಸ್‌ನ ಆಚೆಗೂ ತನ್ನ ವಿದ್ಯಾರ್ಥಿಗಳನ್ನ ಬಿಟ್ಟುಕೊಟ್ಟಿಲ್ಲ, ಅಪ್ಪ ಅಮ್ಮನ ಪ್ರೀತಿ ಮರೆತು ತಾವು ತೊಟ್ಟ ಬಣ್ಣದ ಬಟ್ಟೆಯ ಮೇಲೆ ಬಿಳಿಕೋಟು ಗಳಿಸುವ ಕನಸು ಹೊತ್ತು ಬರುವ ಅದೆಷ್ಟೋ ವಿದ್ಯಾರ್ಥಿಗಳ ಆಶಾ ಜ್ಯೋತಿಯೇ ಈ ಪರಿಶ್ರಮ.

‘don’t sit like a rock, work like a clock’ ಎನ್ನುವ ಅನೂಹ್ಯ ಸಿದ್ಧಾಂತವನ್ನ ಮೈಗೂಡಿಸಿಕೊಂಡಿರುವ ಪರಿಶ್ರಮದ ಶ್ರಮಕ್ಕೆ ಇಂದು ಮತ್ತೊಂದು ಗರಿಸೇರಿಸಿದ ಕೀರ್ತಿ ನಮ್ಮ ಈ ವಿದ್ಯಾರ್ಥಿಗಳಿಗೆ ಸಲಲೇ ಬೇಕು. ಹಗಲೆಲ್ಲ ನೀಟ್ ಪರೀಕ್ಷೆಗೆ ತಯಾರಿ ನಡೆಸೋ ವಿದ್ಯಾರ್ಥಿಗಳು ರಾತ್ರಿ ಯಾಗುತ್ತಲೇ ಮತ್ತೆ ಪುಸ್ತಕ ತೆರೆದು ಕೂತು ಬಿಡುತ್ತಾರೆ. ಇಂತಹ ಕಷ್ಟ ಪಟ್ಟು ಓದುವ ವಿದ್ಯಾರ್ಥಿಗಳು ನೀಟ್ ಗೆದು ಗ್ಯಾರಂಟಿ.

ಏಕೆಂದರೆ, ಅದರ ಹಿಂದೆ ಪರಿಶ್ರಮ ತಂಡವಿದೆ. ನಮ್ಮ ನುರಿತ ಪ್ರಾಧ್ಯಾಪಕರ ಮಾರ್ಗದರ್ಶನವಿದೆ. ಹಾಗಾದ್ರೆ ಐಐಟಿ ಜಿಇಇ ಗೆಲ್ಲಬೇಕು ಅಂದ್ರೆ ಏನು
ಮಾಡಬೇಕು ಎಂಬ ಗೊಂದಲಬೇಡ. ಯಾಕಂದ್ರೆ, ವೈದ್ಯಕೀಯ ಪ್ರವೇಶ ಪರೀಕ್ಷೆಯಿಂದ ಈಗ ಐಐಟಿ ಜೆಇಇಗೂ ಪರಿಶ್ರಮದಲ್ಲಿ ಶಿಕ್ಷಣವಿದೆ. ಈಗ ಜೆಇಇ ಪರೀಕ್ಷೆಯ ತರಬೇತಿಗೂ ನಿಮ್ಮ ಹಿಂದೆ ನಾವಿದ್ದೇವೆ. ಸದಾ ವಿದ್ಯಾರ್ಥಿಗಳ ಬೆನ್ನಿಗೆ ನಿಂತು, ಅವರು ಮಾಡುವ ಪ್ರತಿಕೆಲಸದ ಹಿಂದೆ ಅಭಯ ಹಸ್ತ
ಚಾಚುವ ಪರಿಶ್ರಮದಲ್ಲಿ ರೈತನ ಮಗ ಡಾಕ್ಟರ್ ಆಗ್ತಾನೆ, ಯೋಧನ ಮಗ ಅಪ್ಪನಂತೆ ಜೀವ ಉಳಿಸೋ ವೈದ್ಯನಾಗಿ ಹೊರಹೊಮ್ಮುತ್ತಾನೆ, ಆಟೋ ಚಾಲಕನ ಮಗ ಬಿಳಿಕೋಟು ಹಾಕುತ್ತಾನೆ, ಗೂಡಗಂಡಿ ಇಟ್ಟುಕೊಂಡವರ ಮಕ್ಕಳ ಗುರಿ ಕೂಡ ಇಲ್ಲಿ ತಲುಪಿಸಲಾಗುತ್ತದೆ.

ಬೋಧಕ ಮತ್ತು ಬೋಧಕೇತರ ವರ್ಗ ದವರು ಕೊಡುವ ಧೈರ್ಯ, ಪೋಷಕರು ನಮ್ಮ ಮೇಲಿಟ್ಟ ಆತ್ಮವಿಶ್ವಾಸವೇ ನಮಗೆ ಶ್ರೀರಕ್ಷೆ, ನಿಮ್ಮ ಪ್ರೀತಿಯ ಪರಿಶ್ರಮ ಇಂದು ಮತ್ತೊಂದು ಮೈಲಿಗಲ್ಲು ಸೃಷ್ಟಿ ಮಾಡಿದೆ, ಇನ್ನೇನಿದ್ದರೂ ಇತಿಹಾಸ ಸೇರುವುದೊಂದೇ ಬಾಕಿ.